ದಿನೇಶ್ ಅಮೀನ್ ಮಟ್ಟು ಕೊಲೆ ಸುಪಾರಿ ಆರೋಪ: ಬಿಆರ್ ಭಾಸ್ಕರ್ ಪ್ರಸಾದ್ ಬಂಧನ!

ಅಂಕಣಕಾರ ರೋಹಿತ್ ಚಕ್ರತೀರ್ಥ ಹಾಗೂ ತನ್ನನ್ನು ಕೊಲೆ ಮಾಡಲು ಹಿರಿಯ ಪತ್ರಕರ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ದಿನೇಶ್...
ಬಿಆರ್ ಭಾಸ್ಕರ್ ಪ್ರಸಾದ್
ಬಿಆರ್ ಭಾಸ್ಕರ್ ಪ್ರಸಾದ್
ಬೆಂಗಳೂರು: ಅಂಕಣಕಾರ ರೋಹಿತ್ ಚಕ್ರತೀರ್ಥ ಹಾಗೂ ತನ್ನನ್ನು ಕೊಲೆ ಮಾಡಲು ಹಿರಿಯ ಪತ್ರಕರ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದ ಬಿಆರ್ ಭಾಸ್ಕರ್ ಪ್ರಸಾದ್ ಅವರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. 
ಭಾಸ್ಕರ್ ಪ್ರಸಾದ್ ಫೇಸ್ ಬುಕ್ ನಲ್ಲಿ ಸುಪಾರಿ ಕುರಿತಂತೆ ಸುಮಾರು 40 ನಿಮಿಷಗಳ ವಿಡಿಯೋವನ್ನೂ ಹರಿಬಿಟ್ಟಿದ್ದರು. ಈ ಸಂಬಂಧ ದಿನೇಶ್ ಅಮೀನ್ ಮಟ್ಟು ಅವರು ಡಿಜೆ ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನನ್ವಯ ಭಾಸ್ಕರ್ ಪ್ರಸಾದ್ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಭಾಸ್ಕರ್ ಪ್ರಸಾದ್ ರನ್ನು ಬಂಧಿಸಲು ಪೊಲೀಸರು ಮಂಗಳವಾರ ತಡರಾತ್ರಿ 2 ಗಂಟೆಯಿಂದ ಬೆಳಗ್ಗೆವರೆಗೂ ಮನೆ ಬಳಿಯೇ ಕಾದು ನಿಂತಿದ್ದು ಬುಧವಾರ ಬೆಳಗ್ಗೆ ಭಾಸ್ಕರ್ ರನ್ನು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com