ಬೆಂಗಳೂರು: ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತು ವೈಟ್ ಫೀಲ್ಡ್ ರೈಸಿಂಗ್ ಎಂಬ ನಾಗರಿಕ ಗುಂಪು ಮೆಟ್ರೊ ರೈಲು ನಿರ್ಮಾಣ ಕೆಲಸದಿಂದ ರಸ್ತೆಯಲ್ಲಿ ಸಂಚಾರದಟ್ಟಣೆಯುಂಟಾಗಿದೆ ಎಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಗೆ ಪತ್ರ ಬರೆದಿದ್ದಾರೆ.
ಮೆಟ್ರೊ ಕೆಲಸ ಆರಂಭಿಸುವ ಮೊದಲು ರಸ್ತೆ ಅಗಲೀಕರಣ ಮಾಡಿ ನಂತರ ಬಿಎಂಆರ್ ಸಿಎಲ್ ತನ್ನ ಕೆಲಸ ಕೈಗೆತ್ತಿಕೊಂಡಿದ್ದರೆ ಇಂದು ಸಂಚಾರ ದಟ್ಟಣೆಯುಂಟಾಗುತ್ತಿರಲಿಲ್ಲ. ಮಹದೇವಪುರ ಕ್ಷೇತ್ರದಲ್ಲಿ 33 ಅಪಾರ್ಟ್ ಮೆಂಟ್ ಒಕ್ಕೂಟ ಗುಂಪುಗಳಿದ್ದು ಅವುಗಳಲ್ಲಿ 9,390 ಫ್ಲಾಟ್ ಗಳು ಸೇರಿವೆ. ಇಲ್ಲಿನ ನಾಗರಿಕರಿಗೆ ಮೆಟ್ರೊ ಕೆಲಸದಿಂದಾಗಿ ತೊಂದರೆಯಾಗುತ್ತಿದೆ ಎಂದು ಒಕ್ಕೂಟದ ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೆ ಬೆಂಗಳೂರು ಅಪಾರ್ಟ್ ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಸಹಿ ಮಾಡಿದ್ದಾರೆ.
Advertisement