ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿಯ ಎಸ್.ಎಂ.ಜಮಾದಾರ್ ಅವರ ಕುರಿತು ಮಾತನಾಡಿದ ಶಿವಶಂಕರಪ್ಪ " ಅವರು, ಐಎಎಸ್ ಅಧಿಕಾರಿಯಾಗಿದ್ದಾಗ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿಲ್ಲ. ಈಗ ನನಗೆ ಸಮಾಜಕ್ಕೆ ಒಳಿತು ಮಾಡಿ ಎಂದು ಹೇಳಲು ಬರುತ್ತಾರೆ. ನನಗೆ ಬುದ್ದಿ ಹೇಳಲು ಅವರು ಯಾವ ನೈತಿಕ ಹಕ್ಕನ್ನೂ ಹೊಂದಿಲ್ಲ" ಎಂದರು.