ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ಚಾರ್ಮಾಡಿ ಘಾಟಿಯ ಸುಮಾರು ಒಂಭತ್ತು ಕಡೆಗಳಲ್ಲಿ ಗುಡ್ಡ ಕುಸಿತವಾಗಿತ್ತು. ಎರಡೂ ಕಡೆಗಳಲ್ಲಿ ಒಟ್ಟು 210 ವಾಹನಗಳು ರಸ್ತೆ ಮಧ್ಯೆ ಸಿಲುಕಿದ್ದವು. ಇದರಲ್ಲಿ ಸುಮಾರು 1,500 ಪ್ರಯಾಣಿಕರಿದ್ದರು. ಮಕ್ಕಳು, ಹಿರಿಯರು ಸೇರಿ ಅಪಾರ ಪ್ರಯಾಣಿಕರು ಆಹಾರ, ನೀರು, ಔಶಧಗಳಿಲ್ಲದೆ ಪರದಾಡಿದ್ದರು