ಇನ್ನೂ, ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನ ಎಸ್ ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಆದರೆ, ವಿಚಾರಣೆ ವೇಳೆ ಆತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಗೌರಿಯನ್ನ ಶೂಟ್ ಮಾಡಿದ ಬಳಿಕ ಅಮೋಲ್ ಕಾಳೆಗೆ ರಿವಾಲ್ವರ್ ಕೊಟ್ಟಿರುವುದಾಗಿ ಪರಶುರಾಮು ಈ ಮೊದಲು ಹೇಳಿಕೆ ನೀಡಿದ್ದ. ಆದರೆ, ಈಗ ಆ ರಿವಾಲ್ಹರ್ ಯಾರಿಗೆ ಕೊಟ್ಟೆ ಅಂತ ನೆನಪಾಗುತ್ತಿಲ್ಲ ಅಂತಿದ್ದಾನೆ. ಸದ್ಯ ಪರಶುರಾಮ್ ಜೊತೆ ಅಮೋಲ್ ಕಾಳೆ ವಿಚಾರಣೆಯೂ ನಡೆಯುತ್ತಿದೆ.