ಮೂರ್ಖತೆಯನ್ನೇ ಹೊತ್ತಿರುವ ಬುದ್ಧಿಜೀವಿಗಳಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ: ಸಚಿವ ಹೆಗಡೆ

ಬುದ್ಧಿಜೀವಿಗಳ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಬುದ್ಧಿಜೀವಿಗಳು ಮೂರ್ಖತೆಯನ್ನೇ ಹೊತ್ತಿದ್ದಾರೆ, ಅವರಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ...
Anant Kumar Hegde
Anant Kumar Hegde
Updated on
ಬೆಂಗಳೂರು: ಬುದ್ಧಿಜೀವಿಗಳ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಬುದ್ಧಿಜೀವಿಗಳು ಮೂರ್ಖತೆಯನ್ನೇ ಹೊತ್ತಿದ್ದಾರೆ, ಅವರಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ, ಏಕೆಂದರೆ ಅವರ ಬುದ್ಧಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
ಬೆಂಗಳೂರಿನಲ್ಲಿ ಖ್ಯಾತ ಲೇಖಕ ಜಿ.ಬಿ ಹರೀಶ್ ಅವರು ಕನ್ನಡಕ್ಕೆ ತಂದಿರುವ ವೀರ ಸಾವರ್ಕರ್ ಅವರ  ಹಿಂದುತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಹಿಂದುತ್ವ ಸಮುದ್ರವಿದ್ದಂತೆ, ಹಿಂದುತ್ವ ಸತ್ಯವನ್ನು ಒಪ್ಪಿಕೊಳ್ಳುತ್ತದೆ. ಶ್ರೇಷ್ಠ ವಿಚಾರಗಳು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅದನ್ನು ಹಿಂದುತ್ವ ಸ್ವೀಕರಿಸುತ್ತದೆ. ಆದರೆ ಈ ಹಿಂದುತ್ವವನ್ನು ಬುದ್ಧಿಜೀವಿಗಳು ಒಪ್ಪುವುದಿಲ್ಲ, ಏಕೆಂದರೆ ಅವರ ತಲೆಯಲ್ಲಿ ಮೂರ್ಖತನವನ್ನೇ ತಿಂಬಿಕೊಂಡಿದ್ದಾರೆ.  ವಿದೇಶಿ ಬಂಡವಾಳಕ್ಕೆ ತಮ್ಮನ್ನು ಮಾರಿಕೊಂಡಿರುವ ಬುದ್ಧಿಜೀವಿಗಳು ಹಿಂದುತ್ವವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. 
ಬುದ್ಧಿಜೀವಿಗಳನ್ನು ಮುಖವಾಡ ಇದ್ದಾಗಲಷ್ಟೇ ನೋಡಲು ಸಾಧ್ಯ. ಮುಖವಾಡ ಕಳಚಿದರೆ ನೋಡುವುದು ಅಸಾಧ್ಯ, ಹಿಂದುತ್ವವನ್ನು ಕುಗ್ಗಿಸಲು ಯತ್ನಿಸುತ್ತಿರುವ ಬುದ್ಧಿಜೀವಿಗಳನ್ನು ಖಂಡಿಸಬೇಕು ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com