ಯಲ್ಲಾಪುರ: ಕಾರು-ಲಾರಿ ಡಿಕ್ಕಿ,ಒಂದೇ ಕುಟುಂಬದ ಮೂವರ ಸಾವು

ಲಾರಿ-ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರ: ಕಾರು-ಲಾರಿ ಡಿಕ್ಕಿ,ಒಂದೇ ಕುಟುಂಬದ ಮೂವರ ಸಾವು
ಯಲ್ಲಾಪುರ: ಕಾರು-ಲಾರಿ ಡಿಕ್ಕಿ,ಒಂದೇ ಕುಟುಂಬದ ಮೂವರ ಸಾವು
ಯಲ್ಲಾಪುರ: ಲಾರಿ-ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದೆ. 
ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 62ರ ಕಿರುವತ್ತಿ ಕ್ರಾಸ್ ಚಿಕ್ಕಮಾವಳ್ಳಿ ಗ್ರಾಮದಲ್ಲಿ ಕಾರು-ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ವಿನಾಯಕ ಹೆಗಡೆ(35), ಅರ್ಚನ(30) ಶ್ರಾವಣಿ (2) ಮೃತಪಟ್ಟಿದ್ದಾರೆ.
ನಾಲ್ವರು ಜನರಿದ್ದ ಕಾರು ಶಿರಸಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರೆ ಲಾರಿ ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಆಗಮಿಸುತ್ತಿತ್ತು. 
ಅಪಘಾತದಲ್ಲಿ ಗಾಯಗೊಂಡ ಇನ್ನೊಬ್ಬ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಯಲ್ಲಾಪುರ ಪೋಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ನಾಯ್ಕ, ಪಿಎಸ್ ಐ ಎಂ.ಎಸ್. ಹೂಗಾರ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com