ಬೆಳಗಾವಿ: ಹೆಣ್ಣು ಮಗುವನ್ನು ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ, ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು ಬಯಸುತ್ತೇವೆ ಎಂದು ಮಗುವಿನ ತಂದೆ ಸಂದೀಪ್ ಜಾದರ್ ಪ್ರಶ್ನಿಸಿದ್ದಾರೆ.