ಲಿಂಗಾಯತ ಸಮುದಾಯದ ಸದಸ್ಯರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರ ಮೊದಲು ಲಿಂಗಾಯತ ಧರ್ಮವನ್ನು ಸಿಖ್, ಜೈನ, ಬೌದ್ಧರಂತೆಯೇ ಪ್ರತ್ಯೇಕ ಧರ್ಮವನ್ನಾಗಿ ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕಳಿಸಬೇಕೆಂದೂ ಚಂಪಾ ಒತ್ತಾಯಿಸಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಕರ್ನಾಟಕದಿಂದ ಪ್ರತ್ಯೇಕ ಧರ್ಮ ಸ್ಥಾನಮಾನ ಪಡೆದ ಮೊದಲ ಸ್ವತಂತ್ರ ಧರ್ಮವಾಗಲಿದೆ ಎಂದು ಚಂಪ ಅಹೇಳಿದ್ದಾರೆ.