ಕೇವಲ ಅರ್ಧ ಗಂಟೆಯಲ್ಲೇ ಅಜೇಕರ್ ಪೊಲೀಸ್ ಠಾಣೆಯಿಂದ ಬಂದ ಪೊಲೀಸರು ನವೀನ್ ಗೆ ಎಚ್ಚರಿಕೆ ನೀಡಿದ್ದಾರೆ. ನವೀನ್ ಮಾಡುತ್ತಿರುವ ಕೆಲಸದಿಂದ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆಯಾಗಿದೆ, ಶೀಘ್ರವೇ ನವೀನ್ ತಮ್ಮ ಉಚಿತ ಸೇವೆ ನಿಲ್ಲಿಸಬೇಕೆಂದು ಇನ್ಸ್ ಪೆಕ್ಟರ್ ರೋಸಾರಿಯಾ ಡಿಸೋಜಾ ಹೇಳಿದ್ದಾರೆ. ಜೊತೆಗೆ ನವೀನ್ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಎಫ್ ಐ ಆರ್ ದಾಖಲಾಗಿದೆ.