ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜಕೀಯ ಪಕ್ಷಗಳಿಂದ ಮಹಾಸಭಾ ಸಭೆಯಲ್ಲಿ ಲಾಬಿಗೆ ತಯಾರಿ

ಹಿರಿಯ ಕಾಂಗ್ರೆಸ್ ಧುರೀಣ, ಅಖಿಲ ಬಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಮುಂದಾಳತ್ವದಲ್ಲಿ ನಡೆಸಲಿರುವ ಸಭೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ..........
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜಕೀಯ ಪಕ್ಷಗಳಿಂದ ಮಹಾಸಭಾ ಸಭೆಯಲ್ಲಿ ಲಾಬಿಗೆ ತಯಾರಿ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜಕೀಯ ಪಕ್ಷಗಳಿಂದ ಮಹಾಸಭಾ ಸಭೆಯಲ್ಲಿ ಲಾಬಿಗೆ ತಯಾರಿ
ಬೆಂಗಳೂರು: ಹಿರಿಯ ಕಾಂಗ್ರೆಸ್ ಧುರೀಣ, ಅಖಿಲ ಬಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಮುಂದಾಳತ್ವದಲ್ಲಿ ನಡೆಸಲಿರುವ ಸಭೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಎದುರು ನೋಡುತ್ತಿದೆ. ಚುನಾವಣಾ ಭವಿಷ್ಯಕ್ಕಾಗಿ ನಿರ್ಣಾಯಕ ಎನಿಸಿಕೊಂಡಿರುವ ಈ ಸಭೆಯು ಇದೇ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ನಿಡುವ ಸಿದ್ದರಾಮಯ್ಯ ನಿರ್ಧಾರದ ಬಗೆಗೆ ತನ್ನ ನಿಲುವನ್ನು ಪ್ರಕಟಿಸಲಿದೆ.
ಶಿವಶಂಕರಪ್ಪ ಅವರ ರಾಜಕೀಯ ನಿಷ್ಠೆಯಲ್ಲಿ ಯಾವ ಬದಲಾವಣೆಯಿಲ್ಲ ಎಂದು ಅವರಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಸಚಿವ ಸಂಪುಟದ ನಿರ್ಧಾರವನ್ನು ಅವರು ಬಲವಾಗಿ ವಿರೋಧಿಸಿದ್ದಾರೆ. ಇನ್ನು ಕೇವಲ ಶಾಮನೂರು ಅವರಷ್ಟೇ ಅಲ್ಲದೆ ಕೆಲ ಮಠಾಧೀಶಾರು ಸಹ ಸಂಪುಟದ ನಿಲುವನ್ನು ಖಂಡಿಸಿದ್ದು  ನಾಳಿನ ಸಭೆಯಲ್ಲಿ ಅವರು ತಮ್ಮ ಮುಂದಿನ ನಡೆಯ ಕುರಿತ್ಂತೆ ತಿಳಿಸಲಿದ್ದಾರೆ.
ಸಿದ್ದರಾಮಯ್ಯನವರ ಸಚಿವ ಸಂಪುಟದ ಕೆಲ ಲಿಂಗಾಯತ ಸಚಿವರು ಸಭೆಯಲ್ಲಿ ಆಲ್ಗೊಂಡು ಪಂಚಪೀಠದ ಯತಿಗಳಿಗೆ ತಮ್ಮ ನಿಲುವನ್ನು ಮನವರಿಕೆ ಮಾಡಿಕೊಡಲು ಪ್ರಯುತ್ನಿಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಇದೇ ಸಮಯದಲಿ ಶಿವಶಂಕರಪ್ಪ ಅವರು ಧರ್ಮದ ಕುರಿತಂತೆ ಯಾವ ನಿ;ಲುವನ್ನೂ ತೆಗೆದುಕೊಳ್ಳಬಾರದೆಂದು, ಅದು ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದೂ ಕೆಲ ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರ್ರೆ ಎನ್ನುವ ಮಾತುಗಳು ಕೇಳಿಬಂದಿದೆ. ಆದರೆ ಶಿವಶಂಕರಪ್ಪ ಈ ಮಾಹಿತಿಯನ್ನು ತಳ್ಳಿಹಾಕಿದ್ಡಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪವರನ್ನು ಬುಧವಾರ ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಧರ್ಮದ ವಿಚಾರವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಶಿವಶಂಕರಪ್ಪ ಅವರ ಈ ನಡೆ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಾಮನೂರು ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಶಿವಶಂಕರಪ್ಪ ಮಾತ್ರ ಇದನ್ನೆಲ್ಲಾ ತಳ್ಳಿ ಹಾಕಿದ್ದು "ನನ್ನ ಮಗ, ಮಂತ್ರಿ ಎಸ್. ಮಲ್ಲಿಕಾರ್ಜುನ್ ಮತ್ತು ನಾನು ಕಾಂಗ್ರೆಸ್ನಲ್ಲಿದ್ದೇನೆ ಮತ್ತು ಬಿಜೆಪಿಗೆ ಸೇರುವ ವರದಿಗಳು ಆಧಾರರಹಿತವಾಗಿದೆ"  ಎಂದಿದ್ದಾರೆ.
ಜನತಾ ನ್ಯಾಯಾಲಯವೇ ತೀರ್ಮಾನಿಸುತ್ತದೆ
ಮಹಾಸಭಾ ಸಭೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಬಿಜೆಪಿ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಅಂತಿಮಗೊಳಿಸಲಿದೆ. ’ವೀರಶೈವ-ಲಿಂಗಾಯತ ಒಂದೇ’ ಎಂದು ತನ್ನ ನಿಲುವನ್ನು ಸಾರಲು ಅದು ನಿರ್ಧರಿಸಿದ್ದು ವಿಭಜನೆಯ ತಂತ್ರವು ಸಿದ್ದರಾಮಯ್ಯನವರ ಭವಿಷ್ಯಕ್ಕೆ ಮಾರಕವಾಗಲಿದೆ. ಎಂದು ಪಕ್ಷದ ರಾಜ್ಯ ವ್ಯವಹಾರಗಳ ಉಸ್ತುವಾರಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಹೇಳಿದ್ದಾರೆ.ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಇಡೀ ಲಿಂಗಾಯತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಇದೊಂದು ಚುನಾವಣೆ ತಂತ್ರ. ಬಿಜೆಪಿ ಇದನ್ನು ಜನತಾ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com