ಬೆಂಗಳೂರು: ಹಿರಿಯ ಕಾಂಗ್ರೆಸ್ ಧುರೀಣ, ಅಖಿಲ ಬಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಮುಂದಾಳತ್ವದಲ್ಲಿ ನಡೆಸಲಿರುವ ಸಭೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಎದುರು ನೋಡುತ್ತಿದೆ. ಚುನಾವಣಾ ಭವಿಷ್ಯಕ್ಕಾಗಿ ನಿರ್ಣಾಯಕ ಎನಿಸಿಕೊಂಡಿರುವ ಈ ಸಭೆಯು ಇದೇ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿದೆ. ಸಭೆಯಲ್ಲಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ನಿಡುವ ಸಿದ್ದರಾಮಯ್ಯ ನಿರ್ಧಾರದ ಬಗೆಗೆ ತನ್ನ ನಿಲುವನ್ನು ಪ್ರಕಟಿಸಲಿದೆ.