ಜೊತೆಗೆ ಸ್ಥಳದ ಕೊರತೆ ನಿಬಾಯಿಸಲು ಹೆಣ ಹೂಳಿದ ಸ್ಥಳದಲ್ಲಿ ಗೋರಿಗಳನ್ನು ನಿರ್ಮಿಸಬಾರದೆಂದು ಆದೇಶ ಹೊರಡಿಸಿದೆ. ಶವ ಹೂಳಲು ಮಾತ್ರ ಅವಕಾಶ ಇದೆಯೆಂದು ಸುತ್ತೋಲೆಯಲ್ಲಿ ತಿಳಿಸಿದೆ,ಅದಕ್ಕಿಂತ ಹೆಚ್ಚಾಗಿ ಸಮುದಾಯದ ಸದಸ್ಯರು ಈ ಹಿಂದೆ ತಮ್ಮ ಕುಟುಂಬಸ್ಥರನ್ನು ಹೂಳಿದ ಸ್ಥಳದಲ್ಲೇ ಮತ್ತೆ ಹೂಳುವಂತೆ ಕೂಡ ಹೇಳಿದೆ. ರಾಜ್ಯಾದ್ಯಂತ ಮುಸ್ಲಿಮರ ಶ ಹೂಳಲು ಸ್ಥಳದ ಕೊರತೆಯಿದೆ, ಒಂದು ಬಾರಿ ಶವವನ್ನು ಹೂಳಿದ ಮೇಲೆ, ಕೆಲವು ವರ್ಷಗಳ ನಂತರ ಅಲ್ಲಿ ಏನೂ ಉಳಿಯುವುದಿಲ್ಲ, ಹೀಗಾಗಿ ಒಮ್ಮೆ ಶವ ಹೂತ ಜಾಗದಲ್ಲೇ ಮತ್ತೆ ಹೂಳುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಇದರಲ್ಲಿ ಯಾವುದೇ ಕೆಟ್ಟದ್ದು ಇಲ್ಲ ಎಂದು ಕರ್ನಾಟಕ ವಕ್ಫ್ ಮಂಡಳಿ ಆಡಳಿತಾಧಿಕಾರಿ ಮೊಹಮದ್ ಮೊಹ್ಸಿನ್ ತಿಳಿಸಿದ್ದಾರೆ,