ಕೊಡಗಿನಲ್ಲಿ ಸಣ್ಣ ಜಲ ಯೋಜನೆಗೆ ಹಸಿರು ನಿಶಾನೆ!

ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕುಮಾರಧಾರ ನದಿಯುದ್ದಕ್ಕೂ 2014ರಲ್ಲಿ ನೇಮಕಗೊಂಡಿದ್ದ ಸಣ್ಣ ಜಲ ಯೋಜನೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ.
ಕುಮಾರದ್ವಾರ ನದಿ
ಕುಮಾರದ್ವಾರ ನದಿ
Updated on
ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕುಮಾರಧಾರ ನದಿಯುದ್ದಕ್ಕೂ 2014ರಲ್ಲಿ ನಿರ್ಮಿಸಿ, ನೇಮಕಗೊಂಡಿದ್ದ ಸಣ್ಣ ಜಲ ಯೋಜನೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ. 
ಇನ್ನು ಪ್ರಾದೇಶಿಕ ಸಚಿವಾಲಯ ಸಮಿತಿ (ಆರ್ಇಸಿ), ದಕ್ಷಿಣ ವಲಯ, ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಅರಣ್ಯ ಅಲ್ಲದ ಉದ್ದೇಶಕ್ಕಾಗಿ ಅರಣ್ಯ ಪ್ರದೇಶವನ್ನು ಹಂಚಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು ವರದಿಯನ್ನು ಒದಗಿಸುವಂತೆ ನಿರ್ದೇಶಿಸಿತು.
ಕೊಡಗು ಹೈಡೆಲ್ ಯೋಜನೆಗಳ ಪ್ರೈವೇಟ್ ಲಿಮಿಟೆಡ್ ಮಡಿಕೇರಿ ವಿಭಾಗದ ಪುಷ್ಪಗಿರಿ ಪರ್ವತ ಶ್ರೇಣಿ ಅರೆ ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಅರಣ್ಯ ಭೂಮಿಯಲ್ಲಿ 3 ಮೆಗಾವ್ಯಾಟ್ ಸಾಮರ್ಥ್ಯದ ಬೀಡಲಿ ಮಿನಿ ಹೈಡೆಲ್ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಲು  ಮಂಜೂರಾತಿ ನೀಡಿತು. 
ಯೋಜನೆಗೆ ಕೊಡಗು ವಿಭಾಗ ಕಂಪನಿ ಎರಡು ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೂ, ಇದು ರಸ್ತೆ, ಕಟ್ಟಡ ಮತ್ತು ಪ್ರಸರಣ ಮಾರ್ಗವನ್ನು ಹೊರತುಪಡಿಸಿ 2.35 ಎಕರೆ ಹೆಚ್ಚು ಆಕ್ರಮಿಸಿಕೊಂಡಿದೆ ಎಂದು ವರದಿಯಾಗಿತ್ತು. ಇದರಿಂದಾಗಿ 2014 ರಲ್ಲಿ ಆರಂಭವಾದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.  ಅರಣ್ಯ ಪ್ರದೇಶ (ಅರಣ್ಯ ಸಂರಕ್ಷಣಾ) ಕಾಯ್ದೆ(ಎಫ್ಸಿಎ), 1980ರ ಅಡಿಯಲ್ಲಿ ಅರಣ್ಯ ಪ್ರದೇಶವನ್ನು ತಿರುಗಿಸಲು ಡಿಸಿಸಿ ಪ್ರಸ್ತಾಪವನ್ನು ಸಲ್ಲಿಸಿತ್ತು. ಈ ಯೋಜನೆಗೆ ಅಗತ್ಯ ಅನುಮೋದನೆ ಪಡೆಯುವ ತನಕ ಕೆಲಸ ನಿಲ್ಲಿಸಲು ಸೂಚಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com