ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆಲ್ಲುವದಕ್ಕೆ ಯಡಿಯೂರಪ್ಪ ಮತ್ತಿತರರು ಕ್ರಿಮಿನಲ್ ಪಿತೂರಿ ನಡೆಸಿದ್ದರೆಂದು ಆರೋಪಿಸಿದ್ದಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ (ಬೆಂಗಳೂರು ನಗರ ವಿಭಾಗ ಭ್ರಷ್ಟಾಚಾರ ನಿಗ್ರಹ ದಳ) ಇವರಿಗೆ ಮುಕುಂದರಾಜ್ ಪತ್ರ ಬರೆದಿದ್ದಾರೆ.