ರಾಷ್ಚ್ರಕವಿ ಕುವೆಂಪು ಅವರು ಬರೆದಿರುವ ಜಯ ಭಾರತ ಜನನಿಯ ತನುಜಾತೆ ಹಾಡನ್ನು 2004 ರಲ್ಲಿ ನಾಡಗೀತೆ ಎಂದು ಘೋಷಿಸಲಾಯಿತು. ಈ ಹಾಡನ್ನು ಈಗ ಐದರಿಂದ 9 ನಿಮಿಷಗಳವೆರೆಗೆ ಹಾಡಲಾಗುತ್ತಿದೆ. 2006 ರಲ್ಲಿ ಈ ನಾಡಗೀತೆ ಹಾಡುವ ಸಮಯ ತುಂಬಾ ದೀರ್ಘವಾಗಿದೆ ಎಂಬ ದೂರು ಕೇಳಿ ಬಂದಿತ್ತು, ಆ ವೆಳೆ ಚನ್ನವೀರ ಕಣವಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.