ಮಹಾಜನ್ ಹೇಳುವಂತೆ ಆಕೆ 2017 ರಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸೇರ್ಪಡೆಯಾಗಿದ್ದರು. ಅದಾಗಿ ಆಕೆ ಖರೆ ಬಗೆಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಫೌಂಡೇಷನ್ ಡಿಸೆಂಬರ್ 2017 ರಲ್ಲಿ ಆಂತರಿಕ ತನಿಖಾ ಸಮಿತಿಯನ್ನು ಸ್ಥಾಪಿಸಿತು, ಇದು ಜೂನ್ 2018 ರಲ್ಲಿ ತೀರ್ಪು ನೀಡಿದ್ದು ಖರೆ ತಪ್ಪಿತಸ್ಥರೆಂದು ಪ್ರಕಟಿಸಿತ್ತು. ಫೌಂಡೇಷನ್ ಖರೆ ಮಹಾಜನ್ ಗೆ ಕ್ಷಮಾಪಣಾ ಪತ್ರ ಬರೆದು ಕೊಡುವಂತೆ ಕೇಳಿ ತಿಂಗಳುಗಳು ಉರುಳಿದರೂ ಖರೆಇದರ ಕುರಿತಂತೆ ನಿರ್ಲಕ್ಷ ತಾಳಿದ್ದರು.ಅಲ್ಲದೆ ಅಕ್ಟೋಬರ್ 1, 2018 ರಂದು ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಭೇಟಿ ಮಾಡಿ ಸಮಿತಿ ತೀರ್ಪು ತಡೆ ಹಿಡಿಯುವಂತೆ ಕೋರಿದ್ದರು.