ತುಮಕೂರು: ಹೆಡ್ ಮಾಸ್ಟರ್ ಕೊಲೆ ಪ್ರಕರಣ; ಪತ್ರಕರ್ತೆ ಸೇರಿ ನಾಲ್ವರ ಬಂಧನ

ಕೊಲೆ ಪ್ರಕರಣವೊಂದನ್ನು ಬೇಧಿಸಿರುವ ಕುಣಿಗಲ್ ಪೊಲೀಸರು ಪತ್ರಕರ್ತೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರು: ಹೆಡ್ ಮಾಸ್ಟರ್ ಕೊಲೆ ಪ್ರಕರಣ; ಪತ್ರಕರ್ತೆ ಸೇರಿ ನಾಲ್ವರ ಬಂಧನ
ತುಮಕೂರು: ಹೆಡ್ ಮಾಸ್ಟರ್ ಕೊಲೆ ಪ್ರಕರಣ; ಪತ್ರಕರ್ತೆ ಸೇರಿ ನಾಲ್ವರ ಬಂಧನ

ತುಮಕೂರು:ಕೊಲೆಪ್ರಕರಣವೊಂದನ್ನು ಬೇಧಿಸಿರುವಕುಣಿಗಲ್ ಪೊಲೀಸರು ಪತ್ರಕರ್ತೆಸೇರಿ ನಾಲ್ವರು ಆರೋಪಿಗಳನ್ನುಬಂಧಿಸಿದ್ದಾರೆ.

ಖಾಸಗಿವಾಹಿನಿ ಕ್ರೈಂ ವರದಿಗಾರ್ತಿಯಾಗಿದ್ದತೇಜೇಶ್ವರಿ(28), ನ್ಯಾಚುರಲ್ಹೋಮ್ ಹೋಟೆಲ್ ಮಾಲೀಕ ಬಸವನಗೌಡ(37), ಬೆಂಗಳೂರಿನಅಂಜನಾನಗರ ವೃತ್ತಿಪರ ಛಾಯಾಗ್ರಾಹಕಪ್ರಕಾಶ್ ಕುಮಾರ್,ಅಶೋಕ್(38) ಬಂಧಿತಆರೋಪಿಗಳಾಗಿದ್ದಾರೆ.

ರಾಯಚೂರಿನಲಿಂಗಸಗೂರು ಮೂಲದ ಸುಧೀಂದ್ರಮುತಾಲಿಕ್ ಎಂಬುವವರ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ಈಆರೋಪಿಗಳನ್ನು ಬಂಧಿಸಲಾಗಿದೆಐಪಿಎಲ್ಕ್ರಿಕೆಟ್ ವೇಳೆ ನಡೆಯುತ್ತಿದ್ದಬೆಟ್ಟಿಂಗ್ ಸಂಬಂಧ ಸುಧೀಂದ್ರಮತ್ತು ಬಸನಗೌಡಗೆ ಪರಿಚಯವಾಗಿತ್ತು,ಆರೋಪಿಬಸನಗೌಡ ಸುಧೀಂದ್ರ ಪತ್ನಿ ಅಂಬಿಕಾಜೊತೆ ಅನೈತಿಕ ಸಂಬಂಧ ಹೊಂದಿದ್ದ,

ಸುಧೀಂದ್ರಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರುಹೆಂಡತಿಯಅನೈತಿಕ ಸಂಬಂಧ ವಿಷಯ ತಿಳಿದಮುತಾಲಿಕ್ ಆಕೆಗೆ ವಿಚ್ಥೇದನನೀಡಿದ್ದರು.ಈವೇಳೆ ಆರೋಪಿ ಅಂಬಿಕಾಳನ್ನುವಿವಾಹವಾಗಲು ಬಯಸಿದ್ದ, ಹೀಗಾಗಿಸುದೀಂದ್ರನನ್ನು ಕೊಲೆ ಮಾಡಲುನಿರ್ಧರಿಸಿ,ತೇಜೇಶ್ವರಿಮತ್ತು ಪ್ರಕಾಶ್ ಕುಮಾರ್ ಎಂಬುವರಿಸುಪಾರಿ ನೀಡಿದ್ದ,ಇದಕ್ಕೆಆಪರೇಷನ್ ಊಟ ಆಯ್ತಾ ಎಂಬ ಕೋಡ್ವರ್ಡ್ ನೀಡಿದ್ದರು.

ಸುದೀಂದ್ರಮುತಾಲಿಕ್ ಹೆಸರಿನಲ್ಲಿ ಆರೋಪಿಬಸನಗೌಡ 50ಲಕ್ಷದಎಲ್ ಐಸಿ ಪಾಲಿಸಿ ಮಾಡಿಸಿದ್ದ, ಆರೋಪಿಗಳುಅಕ್ಟೋಬರ್ 29ರಂದುಸುಧೀಂದ್ರನಿಗೆ ಬೆಂಗಳೂರಿನಡಾಬಾವೊಂದರಲ್ಲಿ ಊಟ ಕೊಡಿಸಿ,ಮಧ್ಯಕುಡಿಸಿ ಕೊಲೆಗೈದು ಶವವನ್ನು ಕುಣಿಗಲ್ ನ ಹುಲಿಯೂರು ದುರ್ಗದರಸ್ತೆಯಲ್ಲಿ ಎಸೆದು ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com