ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ: ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಎಫ್ ಬಿ ಪೇಜ್, ಪೋಸ್ಟ್ ಗೆ ಸಮರ್ಥನೆ!

ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆಗೆ ರಾಜಕೀಯ, ಸೈದ್ಧಾಂತಿಕ ವಿರೋಧಿಗಳೂ ಸಂತಾಪ ಸೂಚಿಸುತ್ತಿದ್ದರೆ, ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ಅನಂತ್ ಕುಮಾರ್ ಅವರ ವಿರುದ್ಧ
ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ: ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಎಫ್ ಬಿ ಪೇಜ್, ಪೋಸ್ಟ್ ಗೆ ಸಮರ್ಥನೆ!
ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ: ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಎಫ್ ಬಿ ಪೇಜ್, ಪೋಸ್ಟ್ ಗೆ ಸಮರ್ಥನೆ!
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆಗೆ ರಾಜಕೀಯ, ಸೈದ್ಧಾಂತಿಕ ವಿರೋಧಿಗಳೂ ಸಂತಾಪ ಸೂಚಿಸುತ್ತಿದ್ದರೆ, ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ಅನಂತ್ ಕುಮಾರ್ ಅವರ ವಿರುದ್ಧ ಅವಹೇಳನಕಾರಿ ಬರಹ ಪೋಸ್ಟ್ ಮಾಡಿ ವಿಕೃತಿ ಮೆರೆದಿದೆ. 
ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬೀಜ ಬಿತ್ತಬೇಡ ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದ್ದು, ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ್ ಕುಮಾರ್ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದೂ ಫೋಟೋ ಮೇಲೆ ಹಾಕಲಾಗಿದೆ. 
ಅನಂತ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ಬರೆಯುವುದೂ ಅಲ್ಲದೇ ಮಂಗಳೂರು  ಮುಸ್ಲಿಂ ಪೇಜ್ ನ ಅಡ್ಮಿನ್ ತಮ್ಮ ಪೋಸ್ಟ್ ನ್ನು ಸಮರ್ಥಿಸಿಕೊಂಡಿದ್ದು,  'ಅನಂತ್ ಕುಮಾರ್ ಸಾವಿನ ಹಿಂದೆ ದುಃಖ ಪಡುವ ಅವಶ್ಯಕತೆ ಇಲ್ಲ ಸತ್ತಿದ್ದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಏನು ಗೊತ್ತಿಲ್ಲದ ಅಮಾಯಕರಿಗೆ ಕೋಮು ವಿಷ ಬೀಜ ಬಿತ್ತಿ ಆಳುವ ಇಂಥವರೆಲ್ಲ ಆದಷ್ಟು ಬೇಗ ನಿರ್ನಾಮ ಆಗಲಿ ಎಂದು ಹಿಂದಿನ ಪೋಸ್ಟ್ ಗೆ ಸಮರ್ಥನೆಯಾಗಿ ಮತ್ತೊಂದು ಪೋಸ್ಟ್ ನ್ನು ಅಪ್ ಡೇಟ್ ಮಾಡಲಾಗಿದೆ. ಮಂಗಳೂರು ಮುಸ್ಲಿಂ ಪೇಜ್ ಪೋಸ್ಟ್ ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸಾವಿನಲ್ಲೂ ವಿಕೃತಿ ಮೆರೆದಿರುವ ಪೇಜ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com