ಶಿರಾಡಿ ಘಾಟ್ ನವೆಂಬರ್ 15ರಿಂದ ಭಾರೀ ವಾಹನ ಸಂಚಾರ ಪ್ರಾರಂಭ

ಬೆಂಗಳೂರು-ಮಂಗಳುರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ನಾಳೆ (ನವೆಂಬರ್ 15) ಯಿಂದ ಘನವಾಹನ ಸಂಚಾರ ಪ್ರಾರಂಭವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳುರು: ಬೆಂಗಳೂರು-ಮಂಗಳುರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ನಾಳೆ (ನವೆಂಬರ್ 15) ಯಿಂದ ಭಾರೀ ವಾಹನ ಸಂಚಾರ ಪ್ರಾರಂಭವಾಗಲಿದೆ.
ನಾಳೆಯಿಂದ ಎಲ್ಲಾ ಬಗೆಯ ಘನ ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ಮುಕ್ತವಾಗಲಿದೆ ಎಂದು ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ  ಯು.ಟಿ. ಖಾದರ್ ತಿಳಿಸಿದ್ದಾರೆ. 
ಶಿರಾಡಿ ಘಾಟ್ ಮಾರ್ಗದಲ್ಲಿ ಭಾರೀ ವಾಹನ ಸಂಚಾರದ ಪರಿಣಾಮ ರಸ್ತೆ ಕ್ಷಮತೆ ಹಾಗೂಸುರಕ್ಷತೆ ಕುರಿತು ಇದಾಗಲೇ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳೊಡನೆ ಚರ್ಚೆ ನಡೆಸಲಾಗಿದೆ.ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಸದೃಢವಾಗಿದೆ.. ಈ ಕಾರಣದಿಂದ ನಾಳೆ ಬೆಳಗಿನಿಂದಲೇ ಎಲ್ಲಾ ಬಗೆಯ ವಾಹನಗಳು ಸಂಚಾರ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಮುನ್ನ ಬವೆಂಬರ್.12ರಿಂದಲೇ ಎಲ್ಲಾ ಬಗೆಯ ಭಾರೀ ವಾಹನ ಸಂಚಾರಕ್ಕೆ ಶಿರಾಡಿ ಘಾತ್ ನಲ್ಲಿ ಅನುಮತಿ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಉಭಯ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಬರದ ಕಾರಣ ವಾಹನ ಸಂಚಾರ ಪ್ರಾರಂಭವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com