ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳ ಸಂಗ್ರಹ ಪುಸ್ತಕ ಬಿಡುಗಡೆ

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅಡ್ವೊಕೇಟ್ ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅಡ್ವೊಕೇಟ್ ಅಸೋಸಿಯೇಷನ್ ಏರ್ಪಡಿಸಿದ್ದ 'ಕಂಪ್ಲೀಟ್ ಲಾ ಡೈಜೆಸ್ಟ್ ಆಫ್ ಸುಪ್ರೀಂ ಕೋರ್ಟ್ ಅಂಡ್ ಕರ್ನಾಟಕ ಕೇಸಸ್ 2010-2018' ಪುಸ್ತಕ ಬಿಡುಗಡೆ ಮಾಡಿದರು.

ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಸುಮಾರು 40 ಸಾವಿರ ತೀರ್ಪುಗಳನ್ನು ಸಂಗ್ರಹಿಸಿದ ಪುಸ್ತಕ ಇದಾಗಿದೆ. ಪುಸ್ತಕದಲ್ಲಿ ಸಂಕ್ಷಿಪ್ತ ಪೀಠಿಕೆ ಕೂಡ ಇದ್ದು, ಅದನ್ನು ವ್ಯವಸ್ಥಿತವಾಗಿ ಮತ್ತು ಕಾಲಾನುಕ್ರಮವಾಗಿ ಇಡಲಾಗಿದ್ದು ಕಳೆದ 8 ವರ್ಷಗಳಲ್ಲಿ ನೀಡಿರುವ ತೀರ್ಪುಗಳನ್ನು ಜನರು ಕೂಡಲೇ ಪತ್ತೆಹಚ್ಚಬಹುದು.

ಪುಸ್ತಕವನ್ನು  ಹೆಚ್ ವಿ ನಾಗರಾಜ ರಾವ್ ಮತ್ತು ಅವರ ಪುತ್ರ ಎನ್ ರಾಘವೇಂದ್ರ ರಾವ್ ಸಂಪಾದಿಸಿದ್ದು, ಈ ಪುಸ್ತಕ ನ್ಯಾಯಾಧೀಶರಿಗೆ ಮತ್ತು ವಕೀಲರಿಗೆ ಬೇಗನೆ ತೀರ್ಪು ನೀಡಲು ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ತಿಳಿಸಿದ್ದಾರೆ. ಏಳು ಸಂಪುಟಗಳಲ್ಲಿ ಪುಸ್ತಕ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com