ಬೆಳಗಾವಿಗೆ ಬನ್ನಿ, ನಾವು ರೈತರಾ ಅಲ್ವೋ ಅನ್ನೋದು ತೋರಿಸುತ್ತೇವೆ: ಸಿಎಂ ಗೆ ರೈತ ಮಹಿಳೆ ತಿರುಗೇಟು

ಪ್ರತಿಭಟನೆ ನಡೆಸಿದ್ದ ರೈತರು ರೈತರೇ ಅಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿಗೆ ಕುಮಾರಸ್ವಾಮಿಗೆ ರೈತ ಮಹಿಳೆ ಮುಟ್ಟಿ ನೋಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on
ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಗೆ 4 ವರ್ಷದಿಂದ ನೀನು ಎಲ್ಲಿ ಮಲಗಿದ್ದೆ? ಪ್ರತಿಭಟನೆ ನಡೆಸಿದ್ದ ರೈತರು ರೈತರೇ ಅಲ್ಲ ಎಂದು  ಹೇಳಿದ್ದ ಮುಖ್ಯಮಂತ್ರಿಗೆ ಕುಮಾರಸ್ವಾಮಿಗೆ ರೈತ ಮಹಿಳೆ ಮುಟ್ಟಿ ನೋಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ. 
ಇಂದು ಸುವರ್ಣ ಸೌಧದ ಗೇಟ್ ಮುರಿಯುತ್ತಾರೆ  ಅಂದರೆ ಏನು ಅರ್ಥ? ಲಾರಿ ನುಗ್ಗಿಸಿದವರು ಯಾರೂ ರೈತರಲ್ಲ, ದರೋಡೆಕೋರರು ಎಂಬ ಸಿಎಂ ಹೇಳಿಕೆಗೆ  ಜಯಶ್ರೀ ಎನ್ನುವ ರೈತ ಮಹಿಳೆ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಗೆ ಬನ್ನಿ ನಾವು ರೈತರಾ ಅಲ್ಲವೋ ಎಂಬುದನ್ನ ತೋರಿಸುತ್ತೇವೆ. 4 ವರ್ಷದಿಂದ ಎಲ್ಲಿ ಮಲಗಿದ್ದೆ ಎಂಬ ಹೇಳಿಕೆಗೂ ಪ್ರತಿಕ್ರಿಯೆ ನೀಡಿರುವ ರೈತ ಮಹಿಳೆ 4 ವರ್ಷದಿಂದ ಅಲ್ಲ 10 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ, ಸಿಎಂ ಕುಮಾರಸ್ವಾಮಿ ಹೆಣ್ಣು ಕುಲಕ್ಕೇ ಅವಮಾನ ಮಾಡಿದ್ದಾರೆ. ಯಾವ ನೈತಿಕತೆ ಮೇಲೆ ಈ ರೀತಿ ಮಾತನಾಡಿದ್ದಾರೆ ಎಂದು ಜಯಶ್ರೀ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com