ಬಡವರಿಗೆ ಅಂಗಾಂಗ ಕಸಿ ಚಿಕಿತ್ಸೆಗೆ ಸರ್ಕಾರದಿಂದ ನೆರವು

ಬಡವರಿಗೆ ಅಂಗಾಂಗ ಕಸಿಯ ಅಗತ್ಯವುಳ್ಳವರಿಗೆ ನೆರವಾಗಲು ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಡವರಿಗೆ ಅಂಗಾಂಗ ಕಸಿಯ ಅಗತ್ಯವುಳ್ಳವರಿಗೆ ನೆರವಾಗಲು ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (ಎಸ್ಎಎಸ್ ಟಿ)ನಡಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆಯನ್ನು ಆರಂಭಿಸಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇದು ಬರುತ್ತದೆ. ರಾಜ್ಯ ಸರ್ಕಾರವೇ ಇದರಲ್ಲಿ ಬಹುಪಾಲು ವೆಚ್ಚವನ್ನು ಭರಿಸಲಿದೆ.

ಕರ್ನಾಟಕದ ಅಂಗಾಣು ಕಸಿ ಪ್ರಾಧಿಕಾರ ಜೀವಸಾರ್ಥಕತೆ ಸಂಚಾಲಕ ಡಾ ಕಿಶೋರ್ ಫಡ್ಕೆ, ಕಿಡ್ನಿ ಮತ್ತು ಹೃದ್ರೋಗದ ಕೊನೆಯ ಹಂತದಲ್ಲಿದ್ದರೆ ಬದಲಿ ವ್ಯವಸ್ಥೆ ಇರುವುದಿಲ್ಲ, ಬದಲಿಗೆ ಕಸಿಯೊಂದೇ ಪರಿಹಾರ, ಹೀಗಾಗಿ ಬಡಜನತೆಗೆ ಸರ್ಕಾರದ ಉತ್ತಮ ಸೌಲಭ್ಯವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com