ಜನಸ್ನೇಹಿ ತರಬೇತಿ ನೀಡಲು ಪೊಲೀಸರ ಪಠ್ಯಕ್ರಮದಲ್ಲಿ ಬದಲಾವಣೆ: ಪರಮೇಶ್ವರ್

ಜನರು ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯಲು ಯಾವುದೇ ಭಯವಿಲ್ಲದೇ ಬರುವಂತ ವಾತಾವರಣ ನಿರ್ಮಿಸಲು ಪೊಲೀಸರಿಗೆ ತರಬೇತಿ ವೇಳೆಯೇ ...
ಪರಮೇಶ್ವರ್
ಪರಮೇಶ್ವರ್
ಬೆಂಗಳೂರು: ಜನರು ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯಲು ಯಾವುದೇ ಭಯವಿಲ್ಲದೇ ಬರುವಂತ ವಾತಾವರಣ ನಿರ್ಮಿಸಲು ಪೊಲೀಸರಿಗೆ ತರಬೇತಿ ವೇಳೆಯೇ ಜನಸ್ನೇಹಿಯಾಗಿಸಲು ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನವೀಕರಣಗೊಂಡ ತಿಲಕ್ ನಗರ ಪೊಲೀಸ್ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡಿದ ಪರಮೇಶ್ವರ್, ಇಲ್ಲಿಯವರೆಗೆ ಪಠ್ಯಕ್ರಮದಲ್ಲಿ ಪೊಲೀಸ್ ಬಗ್ಗೆ ಮಾತ್ರ  ತರಬೇತಿ ಇರುತ್ತಿತ್ತು. ಆದರೆ ಜನರು ಯಾವುದೇ ಹಿಂಜರಿಕೆಯಿಲ್ಲದೇ ಪೊಲೀಸ್ ಠಾಣೆಗೆ ಹೋಗುವಂತ ವಾತಾವರಣ ನಿರ್ಮಿಸಬೇಕಾಗಿದೆ, ಹೀಗಾಗಿ ನಾವು ಪಠ್ಯಕ್ರಮದಲ್ಲೇ ಬದಲಾವಣೆ ತರಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ವೇತನ ತಾರತಮ್ಯ ಸರಿದೂಗಿಸಲು ರಾಘವೇಂದ್ರ ಔರಾದ್ಕರ್ ಅವರು ವರದಿಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು. 
22 ಕೋಟಿ ರು ವೆಚ್ಚದಲ್ಲಿ ಇನ್ ಫೋಸಿಸ್ ಕಂಪನಿ  ಸೈಬರ್ ಕ್ರೈಂ ತರಬೇತಿ ಕಟ್ಟಡವನ್ನು ನಿರ್ಮಿಸಿಕೊಡುತ್ತಿರುವುದಕ್ಕೆ ಪರಮೇಶ್ವರ ಅಭಿನಂದನೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com