ನವೀಕರಣಗೊಂಡ ತಿಲಕ್ ನಗರ ಪೊಲೀಸ್ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡಿದ ಪರಮೇಶ್ವರ್, ಇಲ್ಲಿಯವರೆಗೆ ಪಠ್ಯಕ್ರಮದಲ್ಲಿ ಪೊಲೀಸ್ ಬಗ್ಗೆ ಮಾತ್ರ ತರಬೇತಿ ಇರುತ್ತಿತ್ತು. ಆದರೆ ಜನರು ಯಾವುದೇ ಹಿಂಜರಿಕೆಯಿಲ್ಲದೇ ಪೊಲೀಸ್ ಠಾಣೆಗೆ ಹೋಗುವಂತ ವಾತಾವರಣ ನಿರ್ಮಿಸಬೇಕಾಗಿದೆ, ಹೀಗಾಗಿ ನಾವು ಪಠ್ಯಕ್ರಮದಲ್ಲೇ ಬದಲಾವಣೆ ತರಲು ಬಯಸಿದ್ದೇವೆ ಎಂದು ಹೇಳಿದ್ದಾರೆ.