ಬೆಂಗಳೂರು: ರಾಜ್ಯ ಸರ್ಕಾರದ 1ರಿಂದ 12ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲು ರಾಜ್ಯ ಗ್ರಂಥಾಲಯ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಕೇರಳ ಮೂಲದ ಸರ್ಕಾರೇತರ ಸಂಘಟನೆಯೊಂದಿಗೆ ಸಹಿ ಮಾಡಿಕೊಂಡಿದೆ.
ಕೇರಳ ಮೂಲದ ಸಂಘಟನೆಯಾದ ಸಾಯಿ ಸಂಜೀವಿನಿ ಚಾರಿಟೆಬಲ್ ಟ್ರಸ್ಟ್ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾವಿರಾರು ಪುಸ್ತಕಗಳು ಮತ್ತು ಪಠ್ಯಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿದೆ. ಇದೀಗ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಸಿಗುವಂತೆ ಮಾಡಲು ಪಠ್ಯಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಿದೆ.
ಮೊದಲ ಹಂತದಲ್ಲಿ, ಜಿಲ್ಲೆಗಳಲ್ಲಿರುವ ಸುಮಾರು 30 ಲೈಬ್ರೆರಿಗಳಲ್ಲಿ 27 ಬೆಂಗಳೂರು ನಗರದಲ್ಲಿ, 200 ಬಿಬಿಎಂಪಿ ಅಡಿಯಲ್ಲಿ ಮತ್ತು 176 ಲೈಬ್ರೆರಿಗಳಲ್ಲಿ ತಾಲ್ಲೂಕು ಹಂತದಲ್ಲಿ ಡಿಜಿಟಲೀಕರಣಗೊಳ್ಳಲಿದೆ. ಒಟ್ಟು 433 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.1ರಿಂದ 10ನೇ ತರಗತಿಯವರೆಗಿನ ಎನ್ ಸಿಇಆರ್ ಟಿ ಪಠ್ಯಪುಸ್ತಕಗಳನ್ನು ಸಹ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಎಸ್ ಹೊಸಮನಿ ತಿಳಿಸಿದ್ದಾರೆ.
ಮಕ್ಕಳ ಸಮಗ್ರ ಅಭಿವೃದ್ಧಿಗೆ ಇ-ಪುಸ್ತಕಗಳು ಮತ್ತು ವಿಡಿಯೊಗಳನ್ನು ಒದಗಿಸುವುದು ಇದರ ಉದ್ದೇಶ. ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಇದರ ಜೊತೆಗೆ 100 ಪತ್ರಿಕೆಗಳು ಕೂಡ ಡಿಜಿಟಲ್ ಮಾದರಿಯಲ್ಲಿ ಸಿಗಲಿದೆ.
Advertisement