ನಲಪಾಡ್ ಮಾದರಿಯ ಮತ್ತೊಂದು ಕೇಸ್: ನಿವೃತ್ತ ಡಿವೈಎಸ್‍ಪಿ ಕೋನಪ್ಪ ರೆಡ್ಡಿ ಪುತ್ರನಿಂದ ಹಲ್ಲೆ, ಪೊಲೀಸರ ಶೋಧ!

26 ವರ್ಷದ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ ಪಿ ಕೋನಪ್ಪ ರೆಡ್ಡಿ ಪುತ್ರನಿಗಾಗಿ ಹೈಗ್ರೌಂಡ್ ಪೊಲೀಸರು ಶೋಧ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 26 ವರ್ಷದ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ ಪಿ ಕೋನಪ್ಪ ರೆಡ್ಡಿ ಪುತ್ರನಿಗಾಗಿ ಹೈಗ್ರೌಂಡ್ ಪೊಲೀಸರು ಶೋಧ ನಡೆಸಿದ್ದಾರೆ. 
ಸೆಪ್ಟೆಂಬರ್ 8 ರಂದು ನಿವೃತ್ತ ಡಿವೈಎಸ್‍ಪಿ ಕೋನಪ್ಪ ರೆಡ್ಡಿ ಪುತ್ರ ಸುಮನ್ ಮತ್ತು ಗ್ಯಾಂಗ್ ಹೋಟೆಲಿನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.
ಯುವರಾಜ್ ಸ್ನೇಹಿತ ಕಾರ್ತಿಕ್ ಆಸ್ಪತ್ರೆಗೆ ಸೇರಿಸಲು ಹೋಟೆಲ್ ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಆರೋಪಿಗಳು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಾರಿನ ನಂಬರ್ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆ ಕಾರು ಕೋನಪ್ಪ ರೆಡ್ಡಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ, ಕೋನಪ್ಪ ರೆಡ್ಡಿ ಪುತ್ರ ಸುಮನ್ ಮತ್ತು ಆತನ ಸ್ನೆಹಿತರು ಈ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ, 
ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಆದರೆ ಆರೋಪಿಗಳು ನಾಪತ್ತೆಯಾಗಿದ್ದಾರೆ,  ಘಟನೆ ನಡೆದು 24 ದಿನವಾದ್ರೂ ಆರೋಪಿಗಳು ಪತ್ತೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com