ದಾವಣಗೆರೆ: ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಮಹಿಳೆಯಿಂದ ಚಪ್ಪಲಿ ಸೇವೆ!

ಸಾಲ ಕೊಡುವುದಾಗಿ ನಂಬಿಸಿ ಮಂಚಕ್ಕೆ ಆಹ್ವಾನಿಸಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬನಿಗೆ ಮಹಿಳೆಯು ಚಪ್ಪಲಿ, ಪೊರಕೆಯಿಂದ ಹೊಡೆದು ಬುದ್ದಿ ಹೇಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಮಹಿಳೆಯಿಂದ ಚಪ್ಪಲಿ ಸೇವೆ!
ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಮಹಿಳೆಯಿಂದ ಚಪ್ಪಲಿ ಸೇವೆ!
Updated on
ದಾವಣಗೆರೆ: ಸಾಲ ಕೊಡುವುದಾಗಿ ನಂಬಿಸಿ ಮಂಚಕ್ಕೆ ಆಹ್ವಾನಿಸಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬನಿಗೆ ಮಹಿಳೆಯು ಚಪ್ಪಲಿ, ಪೊರಕೆಯಿಂದ ಹೊಡೆದು ಬುದ್ದಿ ಹೇಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ದೇವಣ್ಣ ಎಂಬಾತನೇ ಮಹಿಳೆಯಿಂದ ಏಟು ತಿಂದ ಆಸಾಮಿ. ದಾವಣಗೆರೆ ನಗರ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದ ಘಟನೆಯಲ್ಲಿ ಮಹಿಳೆಯಿಂದ ಏಟು ತಿಂದ ಮ್ಯಾನೇಜರ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಸಾಲ ಪಡೆಯಲು ಬ್ಯಾಂಕ್ ಗೆ ತೆರಳಿದ್ದ ಮಹಿಳೆಗೆ ತಾನು ಸಾಲ ನೀಡಬೇಕಾದರೆ ಮಂಚಕ್ಕೆ ಬಾ ಎಂದು ಆಹ್ವಾನಿಸಿದ್ದಾರೆ. ಇದರಿಂದ ಕ್ರೋಧಿತಳಾದ ಮಹಿಳೆ ನಡುರಸ್ತೆಯಲ್ಲೇ ಮ್ಯಾನೇಜರ್ ಗೆ ಚಪ್ಪಲಿ ಸೇವೆ ನಡೆಸಿ ಸರಿಯಾದ ಪಾಠ ಕಲಿಸಿದ್ದಾಳೆ.
ದಾವಣಗೆರೆ ನಗರ ಮಹಿಳಾ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com