ರಾಜ್ಯ
ಬೆಂಗಳೂರು: ಕ್ಯಾಸಿನೋ ಶೋಕಿಗಾಗಿ ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ
ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್ಜಂಗ್ಲಿ ಎಂಬಾತ ಬಂಧಿತ ..
ಬೆಂಗಳೂರು: ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್ಜಂಗ್ಲಿ ಎಂಬಾತ ಬಂಧಿತ ಆರೋಪಿ.
ವೀಕ್ ಎಂಡ್ನಲ್ಲಿ ಒಂಟಿಯಾಗಿ ಇರುವ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿ ಬಳಿಕ ವಿಮಾನದಲ್ಲಿ ಗೋವಾಗೆ ಹೋಗುತ್ತಿದ್ದ. ಅಲ್ಲಿ ಗೋವಾದಲ್ಲಿ ಕ್ಯಾಸಿನೋ ಆಡುವುದಕ್ಕಾಗಿ ಮನೆಕಳ್ಳತನ ಮಾಡುತ್ತಿದ್ದ. ಅದು ಕೂಡ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ರಾಡ್ನಿಂದ ಬೀಗ ಮುರಿದು ಎಂಟ್ರಿ ಕೊಡುತ್ತಿದ್ದ. ನಂತರ ಫಿಂಗರ್ ಪ್ರಿಂಟ್ ಸಿಗಬಾರದು ಅಂತ ಮುಟ್ಟಿದ ಜಾಗವನ್ನು ಬಟ್ಟೆಯಿಂದ ಕ್ಲೀನ್ ಮಾಡುತ್ತಿದ್ದ.
ಇದೀಗ ಗಿರಿನಗರ ಪೊಲೀಸರು ಬಂಧಿಸಿ ಪ್ರಕಾಶ್ನಿಂದ ಒಂದು ಡಿಯೋ ಬೈಕ್ ಸೇರಿದಂತೆ 600 ಗ್ರಾಂ ಚಿನ್ನಾಭರಣ ಸೇರಿದಂತೆ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕ್ಯಾಸಿನೋ ಆಡುವುದರೊಂದಿಗೆ ಐಷಾರಾಮಿ ಜೀವನ ನಡೆಸಲು ಈತ ಕಳ್ಳತನ ಮಾಡುತ್ತಿದ್ದ, ಈತನ ವಿರುದ್ಧ ಕೊಡಿಗೆಹಳ್ಳಿಯಲ್ಲಿ 10 ಕೇಸ್, ವಿಜಯನಗರ ಠಾಣೆಯಲ್ಲಿ ಮತ್ತು ಚೆನ್ನಮ್ಮನಕೆರೆಯಲ್ಲಿ ಕೇಸ್ ದಾಖಲಾಗಿದೆ.