ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಅನಾರೋಗ್ಯ: ಧರ್ಮಸ್ಥಳ ಭೇಟಿ ರದ್ದು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯದಿಂದ ಪೀಡಿತರಾದ ಕಾರಣ ಅವರ ನಿಯೋಜಿತ ಧರ್ಮಸ್ಥಳ ಭೇಟಿ ರದ್ದಾಗಿದೆ.
ಸಿಎಂ ಎಚ್ ಡಿಕೆ
ಸಿಎಂ ಎಚ್ ಡಿಕೆ
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯದಿಂದ ಪೀಡಿತರಾದ ಕಾರಣ ಅವರ ನಿಯೋಜಿತ ಧರ್ಮಸ್ಥಳ ಭೇಟಿ ರದ್ದಾಗಿದೆ.
ಕುಮಾರಸ್ವಾಮಿಯವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವ ಅವರು ಇದೀಗ ಮನೆಯಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಕಾರಣದಿಂದ ಧರ್ಮಸ್ಥಳ ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ.
ಧರ್ಮಸ್ಥಳದಲ್ಲಿ ನವೀಕೃತ ಮಂಜೂಷಾ ವಸ್ತು ಸಂಗ್ರಹಾಲಯ ಉದ್ಘಾಟನೆ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತನೇ ವರ್ಷದ ವರ್ಧಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ನೀಡಬೇಕಿತ್ತು.
ಮಧ್ಯಾಹ್ನ  ಆಗಮಿಸಲಿರುವ ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸಕಲ ಸಿದ್ದತೆ ನಡೆದಿತ್ತು. ಆದರೆ ಅನಾರೋಗ್ಯದ ಕಾರಣ ಈಗ ಮುಖ್ಯಮಂತ್ರಿಗಳು ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.
ರದ್ದಾಗಿರುವ ಕಾರ್ಯಕ್ರಮಗಳ ವಿವರ ಹೀಗಿದೆ:
- ಧರ್ಮಸ್ಥಳ ಭೇಟಿ
- ಕೈಗಾರಿಕೆಗಳಿಗೆ ಬಳಸಲ್ಪಡುವ ನೀರಿನ ದರದ ಪರಿಷ್ಕರಣೆ ಕುರಿತ ಸಭೆ
- ಭಾರತ್ ಗೋಲ್ಡ್ ಮೈನಿಂಗ್ ಕಂಪನಿ, ಕೆಜಿಎಫ್ ಅನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಸಂಬಂಧದ ಸಭೆ
- ಕೆಪಿಸಿ ಬೋರ್ಡ್ ಮೀಟಿಂಗ್ 
- ಬಿಇಎಂಎಲ್ ವತಿಯಂಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ
- ಕೆಎಎಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಭೇಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com