ಚೆನ್ನೈ, ಹೈದರಾಬಾದ್ ಮತ್ತು ದೆಹಲಿ ಮುಂತಾದ ಇತರ ನಗರಗಳಲ್ಲಿಯೂ ಸಹ ನಕಲಿ ಉದ್ಯೋಗ ಭರವಸೆಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ.ಇಂತಹಾ ವಂಚಕರು ನಕಲಿ ಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳನ್ನು ಬಳಸುತ್ತಾರೆ. ನೋಯಿಡಾದಲ್ಲಿ ಈ ಮರ್ಜರ್ ಟೆಕ್ನಾಲಜಿ ಸಂಸ್ಥೆ ನೊಂದಣಿಯಾಗಿದೆ.ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ದೂರಿನಲ್ಲಿ ಒಟ್ಟು 47 ಜನರ ಹೆಸರಿದ್ದು ಅವರೆಲ್ಲಾ ವಂಚನೆ ಮೂಲಕ ಪಡೆದ ಹಣದ ವಿವರವೂ ಸಹ ದಾಖಲಾಗಿದೆ.