ಕರ್ನಾಟಕ ರಾಜ್ಯ ಕೌನ್ಸಿಲ್ ಫಾರ್ ಹೈಯರ್ ಎಜುಕೇಷನ್ (ಕೆಎಸ್ಎಸ್ಇಇ) ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಬಳಿಕ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಕೆಎಸ್ಎಸ್ಇಇ ಅಧಿಕಾರಿಗಳು ಹೇಳಿದಂತೆ ಇದಾಗಲೇ ಚಾಲನೆಯಲ್ಲಿರುವ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಹ ಉರ್ದು ಕೋರ್ಸ್ ಗಳಿಗೆ ಯಾವ ಹೆಚ್ಚಿನ ಬೇಡಿಕೆ ಇಲ್ಲ . ಹೀಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಅಗತ್ಯವಿಲ್ಲ.