ಆದರೆ ಎಸ್ಐಟಿ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು ಆರೋಪಿ ಸೂರ್ಯವಂಶಿ ಪರ ವಕೀಲರ ಆರೋಪ ನಿರಾಧಾರವಾದದ್ದು. ಸಂಪೂರ್ಣ ಸುಳ್ಳು ಎಂದು ಹೇಳಿದೆ. "ಕೆ.ಸಿ.ಒ.ಸಿ.ಎ.ಎ ನಿಬಂಧನೆಗಳ ಕಟ್ಟುನಿಟ್ಟಾದ ಅನುಷ್ಠಾನ ಮಾಡಲಾಗಿದ್ದು ಯಾವುದೇ ಅಕ್ರಮ ನಡೆದಿಲ್ಲ.ಸ್ಐಟಿಯ ಭಾಗವಾಗಿಲ್ಲದ ಎಸ್ಪಿ ಶ್ರೇಣಿಯ ಅಧಿಕಾರಿಗಳು ಅವನಿಂದ ಹೇಳಿಕೆ ಪಡೆದಿದ್ದಾರೀ ನ್ನುವುದು ಸುಳ್ಳು.ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದ್ದಂತೆ ಸೂರ್ಯವಶಿಯನ್ನು ಅಧಿಕೃತ ನ್ಯಾಯಾಲಯದ ನ್ಯಾಯಮೂರ್ತಿಗಳ ಬಳಿ ಹಾಜರುಪಡಿಸಲಾಗಿತ್ತು.ಅಲ್ಲಿ ಆರೋಪಿಯು ಖಾಲಿ ಪತ್ರಗಳಿಗೆ ಸಹಿ, ಹಾಕಿಸಿರುವ ಯಾವ ಆರೋಪ ಮಾಡಿಲ್ಲ.ಹೇಳಿಕೆಗಳನ್ನು ಅರ್ಥಮಾಡಿಕೊಳ್ಳದೆ, ಹೇಳಿಕೆಗಳನ್ನು ಓದದೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿ ಎಲ್ಲಿಯೂ ಹೇಳಿಲ್ಲ.