ಕುಟುಂಬ ಸಮೇತ ಸಿದ್ದರಾಮಯ್ಯ ಯುರೋಪ್ ಪ್ರವಾಸ: ಸರ್ಕಾರ ಉರುಳಿಸುವ ತಂತ್ರಕ್ಕೆ ಸದ್ಯ ಬ್ರೇಕ್!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಜೊತೆ ಯೂರೋಪ್ ಪ್ರವಾಸಕ್ಕೆ ತೆರಳಲಿದ್ದಾರೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಜೊತೆ ಯೂರೋಪ್ ಪ್ರವಾಸಕ್ಕೆ ತೆರಳಲಿದ್ದಾರೆ.
ಶಾಸಕ ಗೋವಿಂದರಾಜು ಮತ್ತು ಅವರ ಪುತ್ರ ತೆರಳಲಿದ್ದಾರೆ, ಸಚಿವರಾದ ಆರ್ ವಿ ದೇಶಪಾಂಡೆ ಮತ್ತು ಕೆ.ಜೆ ಜಾರ್ಜ್ ಸಿದ್ದರಾಮಯ್ಯ ಜೊತೆ ತೆರಳಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ  ಅವರಿಬ್ಬರೂ ಪ್ರವಾಸದಿಂದ ದೂರ ಉಳಿದಿದ್ದಾರೆ.
ನಾನು ನನ್ನ ಪುತ್ರ ಮತ್ತಿಬ್ಬರ ಜೊತೆ ತೆರಳುತ್ತಿದ್ದೇನೆ, ಯಾವುದೇ ಶಾಸಕರು ನನ್ನ ಜೊತೆ ಬರುತ್ತಿಲ್ಲ, ಇದೆಲ್ಲಾ ಮಾಧ್ಯಮಗಳ ಊಹಾಪೋಹ, ನಾನು ಸೆಪ್ಟಂಬರ್ 15 ರಂದು ವಾಪಸ್ ಬರುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಸಿದ್ದರಾಮಯ್ಯ ರಷ್ಯಾ, ಇಂಗ್ಲೆಂಡ್, ಜರ್ಮನಿ ಪ್ಯಾರಿಸ್ ಮತ್ತು ಸ್ಕಾಟ್ ಲೆಂಡ್ ಪ್ರವಾಸ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com