ರಸ್ತೆ ಓವರ್ ಬ್ರಿಡ್ಜ್ ಅಗಲಿಕರಣಕ್ಕಾಗಿ ಈ ಗುಂಡಿ ಅಗೆಯಲಾಗಿದ್ದು, ಶಕ್ತಿನಗರ ನಿವಾಸಿ ಅಬ್ದುಲ್ ಮನಿಯಾರ್ ಅವರು ನಿನ್ನೆ ರಾತ್ರಿ ಕೇಶವಪುರದಿಂದ ಕೋರ್ಟ್ ಸರ್ಕಲ್ ಕಡೆ ನಡೆದು ಹೋಗುತ್ತಿದ್ದಾಗ ಗುಂಡಿಯ ಮೇಲಿದ್ದ ಶೀಟ್ ಮೇಲೆ ಕಾಲಿಟ್ಟಿದ್ದಾರೆ. ಆದರೆ ಶೀಟ್ ತುಂಡಾಗಿ ಗುಂಡಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ ನಗರ ಪಾಲಿಕೆ ಅಧಿಕಾರಿಗಳು ಮನಿಯಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.