ಹುಬ್ಬಳ್ಳಿ: ಆಳವಾದ ಗುಂಡಿಗೆ ಬಿದ್ದ ಪಾದಚಾರಿಯ ರಕ್ಷಣೆ

ಹುಬ್ಬಳಿಯ ದೇಸಾಯಿ ಸರ್ಕಲ್ ನಲ್ಲಿ ಕಾಂಕ್ರೀಟ್ ಕಂಬ ನಿರ್ಮಾಣಕ್ಕಾಗಿ ಅಗೆದಿದ್ದ ಆಳವಾದ ಗುಂಡಿಗೆ...
ವ್ಯಕ್ತಿಯನ್ನು ರಕ್ಷಿಸುತ್ತಿರುವುದು
ವ್ಯಕ್ತಿಯನ್ನು ರಕ್ಷಿಸುತ್ತಿರುವುದು
ಹುಬ್ಬಳ್ಳಿ: ಹುಬ್ಬಳಿಯ ದೇಸಾಯಿ ಸರ್ಕಲ್ ನಲ್ಲಿ ಕಾಂಕ್ರೀಟ್ ಕಂಬ ನಿರ್ಮಾಣಕ್ಕಾಗಿ ಅಗೆದಿದ್ದ ಆಳವಾದ ಗುಂಡಿಗೆ ಬಿದ್ದಿದ 34 ವರ್ಷದ ಪಾದಚಾರಿಯನ್ನು ಗುರುವಾರ ರಾತ್ರಿ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ರಸ್ತೆ ಓವರ್ ಬ್ರಿಡ್ಜ್ ಅಗಲಿಕರಣಕ್ಕಾಗಿ ಈ ಗುಂಡಿ ಅಗೆಯಲಾಗಿದ್ದು, ಶಕ್ತಿನಗರ ನಿವಾಸಿ ಅಬ್ದುಲ್ ಮನಿಯಾರ್ ಅವರು ನಿನ್ನೆ ರಾತ್ರಿ ಕೇಶವಪುರದಿಂದ ಕೋರ್ಟ್ ಸರ್ಕಲ್ ಕಡೆ ನಡೆದು ಹೋಗುತ್ತಿದ್ದಾಗ ಗುಂಡಿಯ ಮೇಲಿದ್ದ ಶೀಟ್ ಮೇಲೆ ಕಾಲಿಟ್ಟಿದ್ದಾರೆ. ಆದರೆ ಶೀಟ್ ತುಂಡಾಗಿ ಗುಂಡಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ ನಗರ ಪಾಲಿಕೆ ಅಧಿಕಾರಿಗಳು ಮನಿಯಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ವೈದ್ಯರು ಸಹ ಮನಿಯಾರ್ ಅವರು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿದ್ದು, ಉಪ ನಗರ ಪೊಲೀಸ್ ಠಾಣೆಯ ಪೊಲೀಸರು ಘಟನೆ ಕುರಿತು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com