ಮುಂದಿನ ವಾರದಿಂದ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಶೇ. 28 ರಷ್ಟು ದುಬಾರಿ ?

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ. ಮುಂದಿನ ವಾರದಿಂದ ಶೇ. 28 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ  ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ. ಮುಂದಿನ ವಾರದಿಂದ ಶೇ. 28 ರಷ್ಟು  ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ.

 ಜಿಲ್ಲೆಯ ಮಾದನಾಯಕನಹಳ್ಳಿಯಲ್ಲಿ ಬಸ್ ಪ್ರಯಾಣ ದರದ ಏರಿಕೆಯ ಮುನ್ಸೂಚನೆ ನೀಡಿರುವ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ  ಮುಂದಿನ ವಾರದಿಂದಲೇ  ಬಸ್ ಪ್ರಯಾಣ ದರ ಏರಿಕೆ ಅನ್ವಯವಾಗಲಿದೆ ಎಂದು ತಿಳಿಸಿದರು.

ಪೆಟ್ರೋಲ್, ಡೀಸೆಲ್ ದರ  ಪದೇ ಪದೇ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಸಂಸ್ಥೆ  ನಷ್ಟ ಅನುಭವಿಸುತ್ತಿದೆ. ಹಾಗಾಗೀ ಬಸ್ ಪ್ರಯಾಣ ದರ ಅನೀವಾರ್ಯ ಎಂದು ಅವರು ಸಮರ್ಥಿಸಿಕೊಂಡರು

ನಷ್ಟದಿಂದ ರಾಜ್ಯ ಸಾರಿಗೆ ಸಂಸ್ಥೆಯನ್ನು ಪಾರು ಮಾಡಲು ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ  ವಿಭಾಗಗಳಲ್ಲೂ ದರ ಏರಿಕೆ ಅನೀವಾರ್ಯವಾಗಿದ್ದು, ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಏರಿಕೆ ಮಾಡಲಾಗುವುದು  ಎಂದು ಡಿ. ಸಿ. ತಮ್ಮಣ್ಣ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com