ರಾಜ್ಯದ ಜನತೆಗೆ ಸಿಎಂ ಗುಡ್ ನ್ಯೂಸ್ : ಇಂದಿನಿಂದ ಪೆಟ್ರೋಲ್, ಡಿಸೇಲ್ ದರ ಇಳಿಕೆ?

ರಾಜಸ್ತಾನ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಮೇಲಿನ ತೆರಿಗೆ ಇಳಿಸಲಾಗಿದೆ, ...
ಇಂದಿನಿಂದ ಪೆಟ್ರೋಲ್,ಡಿಸೇಲ್ ದರ ಇಳಿಕೆ ಸಾಧ್ಯತೆ
ಇಂದಿನಿಂದ ಪೆಟ್ರೋಲ್,ಡಿಸೇಲ್ ದರ ಇಳಿಕೆ ಸಾಧ್ಯತೆ
ಬೆಂಗಳೂರು: ಆಂಧ್ರ ಪ್ರದೇಶ ಹೊರತು ಪಡಿಸಿ, ರಾಜಸ್ತಾನ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಮೇಲಿನ ತೆರಿಗೆ ಇಳಿಸಲಾಗಿದೆ, ಈ ನಿಟ್ಟಿನಲ್ಲಿ ಕರ್ನಾಟಕ ಕೂಡ,  ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ  ವ್ಯಾಟ್ ಇಳಿಸಲು ನಿರ್ಧರಿಸಿದ್ದು, ಇಂದು ಅಧಿಕೃತ ಆದೇಶ ಹೊರಬೀಳಲಿದೆ. 
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಸಿಎಂ ಕುಮಾರಸ್ವಾಮಿ ಶುಭಸುದ್ದಿ ನೀಡಲಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 2 ರಿಂದ 3 ರು.ನಷ್ಟು ಇಳಿಕೆಗೆ ಸಿಎಂ ಎಚ್ಡಿಕೆ ಸೂಚನೆ ನೀಡಿದ್ದಾರೆ.  ಈ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿದೆ. 
ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿರುವ ಸಿಎಂ ಕುಮಾರಸ್ವಾಮಿ ದರ ಇಳಿಸಲು ಸೂಚನೆ ನೀಡಿದ್ದು, ಅಧಿಕೃತ ಆದೇಶವೊಂದೇ ಬಾಕಿ ಇದೆ. ಕಳೆದ ವಾರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಕುಮಾರ ಸ್ವಾಮಿ ತೈಲಬೆಲೆಗಳ ಮೇಲಿನ ತೆರಿಗೆ ಕಡಿಮೆ ಮಾಡಲು ಚರ್ಚಿಸಲಾಗುತ್ತದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com