ಸೋಮವಾರ ಬೆಳಿಗ್ಗೆ ಆರಕ್ಕೆ ಮೂಡಬಿದಿರೆಯಲ್ಲಿನ ಹೋಟೆಲ್ ನಲ್ಲಿ ಇದ್ದ ಮೊಹಮ್ಮದ್ ಇಮ್ತಿಯಾಜ್ ಮೇಲೆ ಒಂಬತ್ತು ಸದಸ್ಯರಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿದೆ. ಮೂಡಬಿದಿರೆಯ ಹೊರವಲಯದ ಗಂಟಾಲ್ ಕಟ್ಟೆ ಎನ್ನುವಲ್ಲಿ ಈ ಘಟನೆ ನಡೆದಿದ್ದು ದಾಳಿಕೋರರು ತಲ್ವಾರ್ ಬಳಸಿ ಆತನ ಕಾಲು ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ.