ಬೆಂಗಳೂರು: ಮೈಸೂರು ಸೀಮೆಯ ನಾಲ್ಕು ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನೇಮಕ ಮಾಡಿ ರಾಜ್ಯ ಪ್ರವಾಸೋದ್ಯಮ ಹಾಗೂ ರೇಷ್ಮೆ ಇಲಾಖೆ ಆದೇಶ ಹೊರಡಿಸಿದೆ.
ಮೈಸೂರು ವಿಭಾಗವನ್ನು ದಕ್ಷಿಣ ಭಾರತದ ಶ್ರೇಷ್ಠ ಪ್ರವಾಸೋದ್ಯಮ ತಾಣವಾಗಿಸುವ ಹಾಗೆ ಅದಕ್ಕೆ ಸಂಬಂಧ ಪಟ್ಟ ಪೂರಕ ಕಾರ್ಯ ಕೈಗೊಲ್ಳುವದಕ್ಕೆ ಒಡೆಯರ್ ರಾಯಭಾರಿತ್ವದಿಂದ ಅನುಕೂಲವಾಗಲಿದೆ.
ಯದುವೀರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಕೆಲಸಗಳಲ್ಲಿ ರಾಜ್ಯ ಸರ್ಕಾರ ನೆರವು ನೀಡಲಿದೆ.
ಯದುವೀರ್ ತಾವು ಪ್ರವಾಸೋದ್ಯಮ ಇಲಾಖೆ ಸೇರಿ ಸಂಬಂಧಿಸಿದ ಇತ್ರೆ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ ಮೈಸೂರು ಸೀಮೆ ಪ್ರವಾಸೋದ್ಯಮ ಅಭಿವೃದ್ದಿಘಾಗಿ ಯೋಜನೆ ರೂಪಿಸುವಲ್ಲಿ ನೆರವಾಗಲಿದ್ದಾರೆ.