2000 ಜುಲೈ 30ರಂದು ಈರೋಡ್ನ ದೊಡ್ಡಗಾಜನೂರಿನ ರಾಜ್ಕುಮಾರ್ ಅವರ ತೋಟದ ಮನೆಯಿಂದ ಹಣಕ್ಕಾಗಿ ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಹಣದ ಬೇಡಿಕೆಯಿಟ್ಟು ಅವರನ್ನು 108 ದಿನಗಳ ಕಾಲ ಕಾಡಿನಲ್ಲಿಯೇ ಕಾಲ ಕಳೆಯುವಂತೆ ಮಾಡಿದ್ದ. ಅಪರಹರಣದ ವೇಳೆ ರಾಜ್ ಕುಮಾರ್ ಅವರ ಜೊತೆ ಪತ್ನಿ ಪಾರ್ವತಮ್ಮ ಇದ್ದರು.
ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ ಬೆಂಗಳೂರಿನಲ್ಲಿ ತಿರುವಲ್ಲೂವರ್ ಪ್ರತಿಮೆ ಸ್ಠಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ. ಈ ಸಂಬಂಧ ತಾಳವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2004 ರಲ್ಲಿ ಧರ್ಮಪುರಿಯಲ್ಲಿ ಎಸ್ ಟಿ ಎಫ್ ತಂಡ ವೀರಪ್ಪನ್ ನನ್ನು ಗುಂಡಿಟ್ಟು ಹತ್ಯೆ ಮಾಡಿತ್ತು.18 ವರ್ಷ 2 ತಿಂಗಳ ಬಳಿಕ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿದೆ,
7 ವರ್ಷಗಳ ಹಿಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು , ಸುಮಾರು 10 ಮಂದಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ.