ಡಾ.ರಾಜ್ ಅಪಹರಣ ಕೇಸ್ 18 ವರ್ಷ ಹಳೇಯದ್ದು, 2006 ರಲ್ಲಿ ನಟಸಾರ್ವಭೌಮ ವಿಧಿವಶರಾದರು, ಅದಾದ ನಂತರ ಕಾಡುಗಳ್ಳ ವೀರಪ್ಪನ್ ಮತ್ತು ಆತನ ಸಹಚರರನ್ನು ಎಸ್ ಟಿಎಫ್ ಅಧಿಕಾರಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು, ಹೀಗಾಗಿ ಕೇಸ್ ಬಹಳ ಕುತೂಹಲ ಮೂಡಿಸಿತ್ತು. 2000 ದ ಜುಲೈ 10 ರಂದು ಗಾಜನೂರಿನಿಂದ ರಾಜಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್ ಸುಮಾರು 108 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ, ನಂತರ ತನ್ನ ಬೇಡಿಕೆ ಈಡೇರಿದ ನಂತರ ರಾಜ್ ಕುಮಾರ್ ಅವರನ್ನು ರಿಲೀಸ್ ಮಾಡಲಾಗಿತ್ತು.