ರೈತರ ಖಾತೆಗೆ 4,000 ರೂ ಜಮೆ ಮಾಡಲು ಅನುದಾನ ಹೊಂದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಆದರೆ ಏಕಾಏಕಿ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಕರ್ನಾಟಕ ಸಾದಿಲ್ವಾರು ನಿಧಿ 1957ಗೆ ಕೈ ಹಾಕಿದ್ದಾರೆ. ಹಿಂದಿನ ಮೈಸೂರು ಸರ್ಕಾರ 30 ಲಕ್ಷ ರೂಗಳ ಕರ್ನಾಟಕ ಆಪತ್ಕಾಲಿನ ನಿಧಿಯನ್ನು ಸ್ಥಾಪಿಸಿತ್ತು. ನಂತರದ ವರ್ಷಗಳಲ್ಲಿ 20 ಕೋಟಿ, 100 ಕೋಟಿ ರೂಗಳಿಗೆ ನಿಧಿಯನ್ನು ಹೆಚ್ಚಳ ಮಾಡಲು 1976 ಹಾಗೂ 2003 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಈಗ ಮೂರನೇ ತಿದ್ದುಪಡಿ ಮೂಲಕ ಬಿಜೆಪಿ ಸರ್ಕಾರ ನಿಧಿಯನ್ನು 2,200 ಕೋಟಿ ರೂಗೆ ಹೆಚ್ಚಳ ಮಾಡಿದೆ.