ರಾಯಚೂರು: ಕಾಲುವೆ ನೀರಿಗಾಗಿ ವೃದ್ದನ ಬರ್ಬರ ಹತ್ಯೆ!

ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ 
ರಾಯಚೂರು: ಕಾಲುವೆ ನೀರಿಗಾಗಿ ವೃದ್ದನ ಬರ್ಬರ ಹತ್ಯೆ!
ರಾಯಚೂರು: ಕಾಲುವೆ ನೀರಿಗಾಗಿ ವೃದ್ದನ ಬರ್ಬರ ಹತ್ಯೆ!
Updated on

ರಾಯಚೂರು:  ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ

ಶಿವರುದ್ರಪ್ಪ(65) ಕೊಲೆಯಾದವರು. ದಾಯಾದಿಗಳಿಬ್ಬರ ಜಮೀನು ಅಕ್ಕ ಪಕ್ಕದಲ್ಲಿದ್ದವು. ಹಳೇ ವೈಷಮ್ಯದ ಹಿನ್ನೆಲೆ ನೀರು ಬಿಡದ ಕಾರಣ ಅಮರೇಶ್ ಹಾಗೂ ಇತರೆ 8 ಜನರು ಜಗಳ ತೆಗೆದು ಮಾರಕಾಸ್ತ್ರದಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹಲ್ಲೆ ವೇಳೆ ಮೃತರ ಮಗ ಶರಣಬಸಪ್ಪ ಅವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮರೇಶ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com