ಎಂ ವೀರಪ್ಪ ಮೊಯ್ಲಿ
ಎಂ ವೀರಪ್ಪ ಮೊಯ್ಲಿ

ಯುಪಿಎ-2 ಸರ್ಕಾರದ ಯೋಜನೆಗಳು ವಿಫಲವಾಗಲು ಜೈರಾಮ್ ರಮೇಶ್ ಕಾರಣ: ವೀರಪ್ಪ ಮೊಯ್ಲಿ ಟೀಕೆ 

ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ನೋವಿನಿಂದ ಲೇಖನವೊಂದನ್ನು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು.  
Published on

ಬೆಂಗಳೂರು: ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ನೋವಿನಿಂದ ಲೇಖನವೊಂದನ್ನು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. 


ಅಚ್ಚರಿಯೆಂಬಂತೆ ಜೈರಾಮ್ ರಮೇಶ್ ಅವರ ಮಾಜಿ ಸಹೋದ್ಯೋಗಿ ಆತ್ಮೀಯ ಸ್ನೇಹಿತ ವೀರಪ್ಪ ಮೊಯ್ಲಿ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿ ಟೀಕಿಸಿದ್ದಾರೆ. ತಾವು ಪರಿಸರ ಖಾತೆ ಮತ್ತು ಅರಣ್ಯ ಖಾತೆ ಸಚಿವರಾಗಿದ್ದಾಗ ಚಿರತೆಯ ಪ್ರಭೇದ ಭಾರತದಲ್ಲಿ ಉಳಿದು ಬೆಳೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆ ಎಂದರೆ ವೀರಪ್ಪ ಮೊಯ್ಲಿಯವರು ಯುಪಿಎ-2 ಸರ್ಕಾರದಲ್ಲಿ ಯೋಜನೆಗಳು ವಿಫಲವಾಗಲು ಜೈರಾಮ್ ರಮೇಶ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ.


ಇತ್ತೀಚೆಗೆ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಎಲ್ಲಾ ಸಮಯಗಳಲ್ಲಿ ಪ್ರಧಾನಿಯವರನ್ನು ಟೀಕಿಸುವುದು ಸರಿಯಲ್ಲ, ಅವರು ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸೋತಿರುವ ವೀರಪ್ಪ ಮೊಯ್ಲಿ, ಜೈರಾಮ್ ರಮೇಶ್ ಅವರು ತಮ್ಮನ್ನು ತಾವು ಎಲ್ಲಾ ವಿಷಯದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಎಂದಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಯೋಜನೆಗಳು ಹಳ್ಳಹಿಡಿಯಲು ಅವರೇ ಕಾರಣ ಎಂದಿದ್ದಾರೆ.


ಜೈರಾಮ್ ರಮೇಶ್ ಸರ್ಕಾರದ ಆಡಳಿತದ ತತ್ವಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಅವರು ಅರಣ್ಯ ಖಾತೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು ಕೂಡ ಆಗಿದ್ದರು. ಅವರು ಪರಿಸರ ಖಾತೆ ನಿರ್ವಹಿಸುತ್ತಿದ್ದಾಗ ಭೂಮಿ ಖರೀದಿ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವು ತೊಂದರೆಗಳನ್ನು ಸೃಷ್ಟಿಮಾಡಿದ್ದರು. ಜನರಿಗೆ ಸುಲಭವಾದ ಯೋಜನೆಗಳನ್ನು ಅವರು ತರುತ್ತಿರಲಿಲ್ಲ ಎಂದು ಮೊಯ್ಲಿ ಟೀಕಿಸಿದರು.


ಇನ್ನು ಜೈರಾಮ್ ರಮೇಶ್ ಅವರನ್ನು ಬೆಂಬಲಿಸಿದ್ದ ಸಂಸದ ಶಶಿ ತರೂರ್ ಅವರನ್ನು ಕೂಡ ಮೊಯ್ಲಿ ಟೀಕಿಸಿದ್ದಾರೆ. ಶಶಿ ತರೂರ್ ಅವರು ಹೇಳಿಕೆಗಳನ್ನು ನೀಡುವುದರಲ್ಲಿ ಮತ್ತು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಅಷ್ಟೆ, ಅವರ ಹೇಳಿಕೆಗಳನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅವರು ಒಬ್ಬ ಗಂಭೀರ ರಾಜಕಾರಣಿಯಾಗಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com