ಬೆಳಗಾವಿ:  ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಡಲು ತಂಬಾಕು ಬಳಕೆ

ಕುಂದಾನಗರಿ ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿ  ತಂಬಾಕು ಮುಕ್ತ ವಲಯ. ಆದರೆ, ಆಶ್ಚರ್ಯವೆಂದರೆ, ಇಲ್ಲಿ ದಾಖಲೆಗಳನ್ನು ಸಂರಕ್ಷಿಸಲು ತಂಬಾಕನ್ನು ಬಳಸಲಾಗುತ್ತಿದೆ. ಕರ್ಫೂರದೊಂದಿಗೆ  ಶತಮಾನಗಳಿಂದಲೂ ಈ ರೀತಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ.
ಮರದ ಕಪಾಟಿನಲ್ಲಿ ತಂಬಾಕು, ಕರ್ಪೂರ
ಮರದ ಕಪಾಟಿನಲ್ಲಿ ತಂಬಾಕು, ಕರ್ಪೂರ

ಬೆಳಗಾವಿ:  ಕುಂದಾನಗರಿ ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿ  ತಂಬಾಕು ಮುಕ್ತ ವಲಯ. ಆದರೆ, ಆಶ್ಚರ್ಯವೆಂದರೆ, ಇಲ್ಲಿ ದಾಖಲೆಗಳನ್ನು ಸಂರಕ್ಷಿಸಲು ತಂಬಾಕನ್ನು ಬಳಸಲಾಗುತ್ತಿದೆ. ಕರ್ಫೂರದೊಂದಿಗೆ ಶತಮಾನಗಳಿಂದಲೂ ಈ ರೀತಿಯಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ

ಮರದ ಕಪಾಟಿನಲ್ಲಿ ಕರ್ಪೂರ ಹಾಗೂ ತಂಬಾಕು ಇರಿಸುವ ಮೂಲಕ 100 ವರ್ಷಕ್ಕೂ ಹಳೆಯದಾದ  ಕೆಲ ದಾಖಲೆಗಳನ್ನು  ಯಾವುದೇ ರೀತಿಯಲ್ಲಿ ಹಾಳಾಗದಂತೆ ಸಂರಕ್ಷಿಸಿಡಲಾಗಿದೆ. 

ಬ್ರಿಟಿಷ್ ಕಾಲದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತುಕ್ಕು ಹಿಡಿಯದಂತಹ ಕಪಾಟವನ್ನು ಇರಿಸಲಾಗಿದೆ. ಅದರಲ್ಲಿ ಜಿರಲೆ, ಗೆದ್ದಿಲು, ಇರುವೆಗಳು ಹೋಗದಂತೆ ತಡೆಯಲು ತಂಬಾಕು ಹಾಗೂ ಕರ್ಪೂರವನ್ನು ಬಳಸಲಾಗುತ್ತದೆ ಎಂದು ಸಬ್ ರಿಜಿಸ್ಟ್ರಾರ್ ಕಚೇರಿಯ ಮೋದಿ ಲಿಪಿ ( ಹಳೆಯ ಮಾರಾಠಿ ಭಾಷೆ ಲಿಪಿ) ಅನುವಾದಕ  ಕೆಕೆ ಮಾರುಚಿ ಹೇಳುತ್ತಾರೆ. 

ಈ ಕಪಾಟಿನಲ್ಲಿ ಹಳೆಯ ಕಾಲದ ಕನ್ನಡ  ಹಾಗೂ ಮೋದಿ ಲಿಪಿಗೆ ಸಂಬಂಧಿಸಿದ ದಾಖಲೆಗಳು ಇವೆ. 1867ರಿಂದಲೂ ಕಚೇರಿಯ ದಾಖಲೆಗಳು ಇರುವುದಾಗಿ ಹಿರಿಯ ಉಪ ನೋಂದಣಾಧಿಕಾರಿ ಗಿರೀಶ್ ಚಂದ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com