ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಗುಂಡೇಟು

ಕೊಲೆ ಮಾಡಲು ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೋಲೀಸರು ಆರೋಪಿ ಬಾಬು ಎಂಬುವವನ ಕಾಲಿಗೆ ಗುಂಡು ಹೊಡೆದು ಆ ಬಳಿಕ ಬಂಧಿಸಿದ್ದಾರೆ. 
ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಗುಂಡೇಟು
ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಗುಂಡೇಟು
Updated on

ಬೆಂಗಳೂರು: ಕೊಲೆ ಮಾಡಲು ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೋಲೀಸರು ಆರೋಪಿ ಬಾಬು ಎಂಬುವವನ ಕಾಲಿಗೆ ಗುಂಡು ಹೊಡೆದು ಆ ಬಳಿಕ ಬಂಧಿಸಿದ್ದಾರೆ. 

ಬಾಲು ಡಿ.10 ರಂದುನಂದಿನಿ ಲೇಔಟ್ ವ್ಯಾಪ್ತಿಯ ಲಗ್ಗೆರೆ ಮುಖ್ಯರಸ್ತೆಯ ಮಾರುತಿ ವೈನ್ಸ್ ಬಳಿ ಆಟೋ ಚಾಲಕ ರಘು ಎಂಬುನ ಕೊಲೆಯಲ್ಲಿ ಭಾಗಿಯಾಗಿದ್ದ. ರಘು ಹತ್ಯೆಗೆ ಆತನ ಮಾವ ಪ್ರಭಾಕರ್ ಆರೋಪಿಗೆ ಸುಪಾರಿ ನೀಡಿದ್ದನೆನ್ನಲಾಗಿದ್ದು ಸುಪಾರಿ ಪಡೆದ ಬಾಲು ಲಗ್ಗೆರೆ ಸೇತುವೆ ಸಮೀಪ ರಘುವನ್ನು ಸಹಚರರ ಜತೆ ಸೇರಿ ಮಾರಕಾಸ್ತ್ರ ಬಳಸಿ ಹತ್ಯೆ ಮಾಡಿದ್ದ.

ಕೊಲೆ ದೃಶ್ಯಗಳು ಸಿಸಿಟಿವಿಯಲ್ಲಿಸ್ ಸೆರೆಯಾಗಿದ್ದು ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಆರೋಪಿಯ ಬಂಧನಕ್ಕೆ ಮುಂದಾಗಿದ್ದ ಪೋಲೀಸರ ಮೇಲೆ ಬಾಲು ಹಲ್ಲೆ ನಡೆಸಲು ಯತ್ನಿಸಿದಾಗ  ಪಿಎಸ್ಐ ವೆಂಕಟರಾಮುಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಇದೀಗ  ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ತಾನು 50 ಸಾವಿರ ರು.ಗಾಗಿ ಕೊಲೆ ಂಆಡಿರುವುದನ್ನು ಪೋಲೀಸರೆದುರು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com