ಬೆಂಗಳೂರು: "ನೀವು ಓಡಾಡುವ ರಸ್ತೆಯಲ್ಲಿ ಗುಂಡಿಗಳಿದೆಯೆ, ಹಾಗಾದರೆ ಎಚ್ಚರದಿಂಡ ವಾಹನ ಚಲಾಯಿಸಿ" ಹೀಗೆಂದವರು ಯಾರೋ ಹಿರಿಯ ನಾಗರಿಕರಾಗಲಿ, ಸಾಮಾನ್ಯ ಜನರಾಗಲಿ ಅಲ್ಲ. ಬದಲಿಗೆ ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ಡಿಸಿ ತಮ್ಮಣ್ಣ. ಹೌದು, ಸೋಮವಾರ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ಬೆಂಗಳೂರು ಸಾವಿರಾರು ಕಿಲೋಮೀಟರ್ ರಸ್ತೆಯನ್ನು ಹೊಂದಿದೆ. ಈ ಕಾರಣದಿಂದ ಪ್ರತಿದಿನ ಗುಂಡಿಗಳ ಪರಿಶೀಲನೆ, ಅದರ ದುರಸ್ತಿಯನ್ನೇ ಮಾಡುತ್ತಾ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.