ಆದಿಚಂಚನಗಿರಿ ಮಠ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮತ್ತು ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ ಅವರುಗಳ ಪ್ರಯತ್ನದಿಂದ 1989 ರಲ್ಲಿ ಕುಂಭ ಮೇಳ ಪ್ರಾರಂಭವಾಗಿತ್ತು. ಟಿ. ನರಸಿಪುರದ ತ್ರಿವೇಣಿ ಸಂಗಮದ ಕುಂಭ ಮೇಳ ದಕ್ಷಿಣ ಭಾರತದ ಭಕ್ತರಿಗೆ ಸುವರ್ಣ ಅವಕಾಶ ಒದಗಿಸಿದೆ.