ಬೀದಿ ವ್ಯಾಪಾರಿಯಾದ ತಾನು ಕಷ್ಟದಲ್ಲಿದ್ದು, ಬಡ್ಡಿ ವ್ಯಾಪಾರಿಗಳಿಂದ ಶೇ.15ರಷ್ಟು ಬಡ್ಡಿ ದರದಲ್ಲಿ ಹಣ ಪಡೆದಿರುವುದಾಗಿ ಆತ ತಿಳಿಸಿದ. ತಕ್ಷಣ ಸಚಿವರು ಯುವಕನ ಮೊಬೈಲ್ ಸಂಖ್ಯೆ ಪಡೆದರು. ನಂತರ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ, ಸಂಬಂಧಿಸಿದ ಅಧಿಕಾರಿಗಳಿಗೆ ಯುವಕನ ಮೊಬೈಲ್ ನಂಬರ್ ನೀಡಿ ಸಂಪೂರ್ಣ ಮಾಹಿತಿ ಪಡೆಯಲು ಸೂಚಿಸಿದರು.