ಬೆಳಗಾವಿ: ಸೇತುವೆ ಕುಸಿದು ಕಾರು ನೀರುಪಾಲು, ತಪ್ಪಿದ ಅನಾಹುತ

ಸೇತುವೆಯೊಂದು ಕುಸಿದ ಪರಿಣಾಮ ಕಾರೊಂದು ನದಿಗುರುಳಿದ್ದು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗ....
ಬೆಳಗಾವಿ: ಸೇತುವೆ ಕುಸಿದು ಕಾರು ನೀರುಪಾಲು, ತಪ್ಪಿದ ಅನಾಹುತ
ಬೆಳಗಾವಿ: ಸೇತುವೆ ಕುಸಿದು ಕಾರು ನೀರುಪಾಲು, ತಪ್ಪಿದ ಅನಾಹುತ
ಬೆಳಗಾವಿ: ಸೇತುವೆಯೊಂದು ಕುಸಿದ ಪರಿಣಾಮ ಕಾರೊಂದು ನದಿಗುರುಳಿದ್ದು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮಲಪ್ರಭಾ ನದಿಗೆ ಕಟ್ಟಿದ್ದ ಸೇತುವೆ ಕುಸಿದ ಕಾರಣ್ಭ ಈ ಅಪಘಾತ ಸಂಭವಿಸ್ದೆ.ಇಂಡಿಕಾ ಕಾರಿನಲ್ಲಿ ಕಿತ್ತೂರಿನಿಂದ ಬೈಲಹೊಂಗಲಕ್ಕೆ ಪ್ರಯಾಣಿಸುತಿದ್ದ  ಚಿದಾನಂದ್ ಚಿನಿವಾಲರ್ ಹಾಗೂ ಅವರ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. 
ಬೇವಿನಕೊಪ್ಪ ಗ್ರಾಮದ ಸಮೀಪ ಮಲಪ್ರಭಾ ಸೇತುವೆ ಮೇಲೆ ಪ್ರಯಾಣಿಸುವಾಗ ಕಾರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತುದಿಗೆ ಹೋಗಿ ಗುದ್ದಿದೆ.ಹಾಗೆ ಗುದ್ದುತ್ತಲೇ ಸೇತುವೆ ಕುಸಿದಿದ್ದು ಕಾರು ನದಿಗೆ ಉರುಳಿ ಬಿದ್ದಿದೆ. ನದಿಯಲ್ಲಿ ಕಿರುಚಾಟ ಕೇಳಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ರಕ್ಷಿಸಿದ್ದಾರೆ. ಅಲ್ಲಎ ಹಗ್ಗ ಕಟಿ ಕಾರನ್ನು ಸಹ ನೀರಿನಿಂಡ ಮೇಲೆ ತಂದಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com