ಬಳ್ಳಾರಿ: ಒಂದು ಕಾಲದಲ್ಲಿ ಇತಿಹಾಸ ಪ್ರಸಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಸಂಡೂರಿನ ಕುಮಾರಸ್ವಾಮಿ ರಿಸರ್ವ್ ಫಾರೆಸ್ಟ್ ವ್ಯಾಪ್ತಿಯ ದೇವಗಿರಿ ರೇಂಜ್ ನಲ್ಲಿ ಬರುವ ಕಮಾತುರ್ ಗ್ರಾಮ ಇಂದು ವಿವೇಚನಾರಹಿತ ಗಣಿಗಾರಿಕೆಗೆ ಬಲಿಯಾಗುತ್ತಿದೆ. ಇಲ್ಲಿನ ರಸ್ತೆಗಳು ಇಂದು ಕೆಂಧೂಳಿನ ನೆಲಹಾಸನ್ನು ಹೊದ್ದಿದೆ, ಗಣಿಗಾರಿಕೆಯಿಂದ ಉಂಟಾದ ಮಾಲಿನ್ಯಫ಼್ದ ಕಾರಣ ಗ್ರಾಮಸ್ಥರು ಅಸ್ತಮಾ ಮತ್ತಿತರೆ ಉಸಿರಾಟದ ತೊಂದರೆಯನ್ನು ಅನುಭವಿಸುವಂತಾಗಿದೆ. ಮನೆಗಳಿಗೆ ತೆರಳುವ ರಸ್ತೆಗಳ ಬಣ್ಣ ಕೆಂಪು ತಿರುಗಿದೆ, ಇನ್ನು ಮಳೆಗಾಲದಲ್ಲಂತೂ ಹಳ್ಳಿಯ ಜನ ಮನೆಯಿಂದ ಹೊರಗೆ ನಡೆದಾಡುವುದೇ ಕಷ್ಟಸಾಧ್ಯವಾಗಿದೆ. ಈ ಗ್ರಾಮದಲ್ಲಿ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆ ಬಳಕೆಗೆ ಗಣಿಗಾರಿಕೆ ಸಂಸ್ಥೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು! ಇದು ಸಮುದ್ರಮಟ್ಟದಿಂಡ 1,000 ಮೀಟರ್ ಗಳಷ್ಟು ಎತ್ತರದಲ್ಲಿರುವ ಹಳ್ಳಿಯ ಕಿರು ನೋಟ.