"ಇಂದಿಗೂ ನಾನು ಮಠಕ್ಕೆ ತೆರಳಿ ಅಲ್ಲಿನ ಪಾತ್ರೆ, ತಟ್ಟೆಗಳನ್ನು ತೊಳೆಯುತ್ತೇನೆ. ಇದು ನನಗೆ ಬಹಳ ಸಂತೋಷವನ್ನು ನೀಡುತ್ತದೆ. ಮಠವು ನನಗೆ ಕೇವಲ ಶಿಕ್ಷಣವನ್ನಷ್ಟೇ ನೀಡಿದ್ದಲ್ಲ. ಪ್ರತಿ ರೀತಿಯಲ್ಲಿಯೂ ನನ್ನನ್ನು ರೂಪಿಸಿದೆ. ನನಗೆ ಆಹಾರದ ಬಗ್ಗೆ ಕಾಳಜಿ, ಜನರ ಮೇಲೆ ಪ್ರೀತಿ, ರಾಷ್ಟ್ರಪ್ರೇಮವನ್ನು ಕಲಿಸಿದೆ.ಇಂದು, ನೀವು ಜಗತ್ತಿನಲ್ಲಿ ಎಲ್ಲಿಗೇ ಹೋದರೂ ಅಲ್ಲಿ ಶ್ರೀಮಠದ ಕನಿಷ್ಟ ಒಬ್ಬ ವಿದ್ಯಾರ್ಥಿ ಇದ್ದೇ ಇರುತ್ತಾನೆ. ಇಂದು ಪ್ರತಿಯೊಬ್ಬರೂ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸುತ್ತಾರೆ.ಆದರೆ ಅವರ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳು ನಾವು ಈಗಾಗಲೇ 'ವಿಶ್ವ ರತ್ನ'ವನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವರ ಮೇಲೆ ಭಾರತ ರತ್ನ ಎನ್ನುವುದು ಮುಖ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ"